ಸಾಹಿತ್ಯ ಸುದ್ದಿ

ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

೧೯೨೮ರ ಏಪ್ರಿಲ್ ೨ ರಂದು ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ ಕಾಪಸೆ ಅವರು, ಎಂ.ಎ. ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಾಫಿ ಪೂರೈಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಕ.ವಿ.ವಿ ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ ಮತ್ತು ಧಾರವಾಡದ ಹುರಕಡ್ಲಿ ಅಜ್ಜ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ.

ಕನ್ನಡದ ಪ್ರಾಚೀನ ಸಾಹಿತ್ಯದಿಂದ ಹಿಡಿದು, ಹೊಸಗನ್ನಡದ ವಿವಿಧ ಘಟ್ಟಗಳ ವರೆಗಿನ ಎಲ್ಲ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಗುರುಲಿಂಗ ಕಾಪಸೆ ಅವರು, ಬಹಳ ಮುಖ್ಯವಾಗಿ ಕನ್ನಡ ಅನುಭಾವ ಸಾಹಿತ್ಯ ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಿದವರು. ಶ್ರೀ ಅರವಿಂದರು, ಶ್ರೀಮಾತಾಜಿ ಅವರು, ಮಧುರಚೆನ್ನರು ಮತ್ತು ಬಸವಾದಿ ಶರಣರು ಅವರ ಅಂತರಂಗವನ್ನು ಬೆಳಗಿದ ಮಾಹಾಚೇತನರು. ಶುದ್ಧ ಸಾತ್ವಿಕ ಸ್ವಭಾವದ ಡಾ. ಗುರುಲಿಂಗ ಕಾಪಸೆ ಅವರು ಅಂತರಂಗದ ಅನುಭಾವಿಗಳಾಗಿ ಸಾಧನೆ ಮಾಡಿದವರು. ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವಲ್ಲಿಯೇ ಅವರು ವೃತ್ತಿಜೀವನದಲ್ಲಿ ನೆಮ್ಮದಿ ಕಂಡಿದ್ದಾರೆ. ಡಾ. ಗುರುಲಿಂಗ ಕಾಪಸೆ ಅವರು ಹೆಚ್ಚು ಗ್ರಂಥಗಳನ್ನು ಬರೆದಿಲ್ಲವಾದರೂ, ‘ನನ್ನ ವಿದಾರ್ಥಿಗಳೇ ನಾನು ಬರೆದ ಸಾವಿರಾರು ಗ್ರಂಥಗಳು’ ಎಂಬ ಸಂತೃಪ್ತಿ ಹೊಂದಿದವರು. ‘ಮಧುರಚೆನ್ನ ಪಿಎಚ್.ಡಿ. ಪ್ರಬಂಧ, ೧೩ ಸ್ವತಂತ್ರ ಕೃತಿಗಳು, ೧೭ ಸಂಪಾದನೆಗಳು, ಅನುವಾದಿತ ಗ್ರಂಥಗಳು-ಹೀಗೆ ಅವರ ಸಾಹಿತ್ಯರಾಶಿ ವಿಪುಲವಾಗಿಯೇ ಇದೆ. ಕೇಳುವ ಎಲ್ಲ ಮನಸ್ಸುಗಳಿಗೂ ಅರಿವಿನ ಬೆಳಕು ಮೂಡಿಸುವ ವಾಗ್ಮಿ ಅವರಾಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯನ್ನೂ ಒಳಗೊಂಡಂತೆ ಹಲವಾರು ಸಂಘ- ಸಂಸ್ಥೆಗಳ ನೇತೃತ್ವ ವಹಿಸಿ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ಮಾಡಿದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ. ದಣಿವರಿಯದೆ ನಿರಂತರವಾಗಿ ಸಾಹಿತ್ಯ ಕೃಷಿಗೈದ ಅನುಭಾವಿ ಡಾ. ಗುರುಲಿಂಗ ಕಾಪಸೆ ಅವರು ದಿನಾಂಕ ೨೭-೩-೨೦೨೪ ರಂದು ನಮ್ಮನ್ನಗಅದರು. ಇಂಥ ಹಿರಿಯ ಸಾಧಕ-ಸಾಹಿತಿಯ ಸ್ಮರಣಾರ್ಥವಾಗಿ ಅವರ ವಿದ್ಯಾರ್ಥಿಗಳು, ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ೧೧,೨೧,೧೧೧ ರೂಪಾಯಿಗಳ ಮೊತ್ತದ ದತ್ತಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ಪ್ರತಿವರ್ಷ ಬರುವ ಬಡ್ಡಿಯ ಹಣದಲ್ಲಿ ಕನ್ನಡದ ಇಬ್ಬರು ಮಹತ್ವದ ಸಾಹಿತಿಗಳಿಗೆ ತಲಾ ರೂ, ೨೫,೦೦೦/-ರೂಪಾಯಿಗಳ ಪ್ರಶಸ್ತಿಯನ್ನು ಹಾಗೂ ಕ.ವಿ.ವಿ.ಯಲ್ಲಿ ಎಂ.ಎ. ಕನ್ನಡ ಓದುತ್ತಿರುವ ಒಬ್ಬ ವಿದ್ಯಾರ್ಥಿಗೆ ೫,೦೦೦/- ರೂಪಾಯಿಗಳ ವಿದ್ಯಾರ್ಥಿ ಪಾರಿತೋಷಕವನ್ನು ಕೊಡಮಾಡಲಾಗುತ್ತದೆ.

೨೦೨೫ನೆಯ ಸಾಅನ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗಳನ್ನು ಹಿರಿಯ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಾಗೂ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರಿಗೆ ಪ್ರದಾನ ಮಾಡಲು ಕರ್ನಾಟಕ ವಿದ್ಯಾವರ್ಧಕ ಸಂಘದ ಆಯ್ಕೆ ಸಮಿತಿಯು ನಿರ್ಧರಿಸಿದೆ.

SHANKAR G

View Comments

Recent Posts

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago