ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ
ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||
ಜಗದ ಸುತ್ತ ಹುತ್ತ ಚಾಚಿದೆ, ಬಿತ್ತಿ ಬೆಳೆಯಲು ಬಿಟ್ಟರದು ಬರಡು
ನೆರೆದ ಮಂದಿಯ ನೂರು ಮಾತಿಗೆ ಕೆರೆಯು ಬತ್ತದಿರಲಿ, ಕೊನೆಗೆ. ||
ಹೊತ್ತು ಗೊತ್ತಿನ ಹುರುಳು ಇಲ್ಲದ ಕೊರಳೊಂದು ಕೆರಳಿದೆ ಬಿಡದೇ
ಸೋತು ಸವಿದು ಒಣಗಿರುವ ಬದುಕಿಗೆ ಬೆಂಕಿ ಹಚ್ಚದಿರಲಿ, ಕೊನೆಗೆ. ||
ಬೆಡಗು ಬೆಂಗುಡಿಗೆ ನಡುಗಿದೆ ಮನ, ಕಡೆಗೂ ತಡೆವವರು ಯಾರು ?
ಚುಚ್ಹುದುಲ ಹೊಳೆಯಲಿ, ದೋಣಿ ದಾರಿಯು ಮುಚ್ಚದಿರಲಿ, ಕೊನೆಗೆ. ||
ಮಬ್ಬಿನಲಿ ಹಬ್ಬಿದ ಹೊಗೆಯು, ಇಬ್ಬನಿಯು ತರದು, ಹುಬ್ಬೇರಿಸದಿರು
ಕಡಿಯುವುದೆ ಕತ್ತಲಿನ ನಾಯಿ ನೆರಳು, ಹುಸಿಯು ಹಬ್ಬದಿರಲಿ, ಕೊನೆಗೆ. ||
ಅಷ್ಟೂ ದಿಕ್ಕಿಗೂ ಎಷ್ಟು ತೂರಿದರೇನು ಕಸವು, ಗಾಳಿ ಬೀಸದೆ “ಬೋಧಿ”
ಸೊಕ್ಕಿದ ಸುಳಿಗಾಳಿಯ ದಿಕ್ಕಿಗೆ, ಮಿಕ್ಕಿ ತೆಕ್ಕೆಯು ಚಾಚದಿರಲಿ, ಕೊನೆಗೆ. ||
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
Sir chenagide nimma gajal
ಸರ್, ಗಜಲ್ ಚೆನ್ನಾಗಿದೆ. ಆದರೆ 'ಚುಚ್ಹುದುಲ ಹೊಳೆಯಲಿ' ಅಂದರೆ ಏನು?
ಸರ್. ಅದು ಹುಚ್ಚುದುಲ ಆಗಬೇಕಿತ್ತು. ತಪ್ಪಾಗಿ ನಮೂದಾಗಿದೆ. ಕ್ಷಮಿಸಿ.
ನಿಮಗೆ ತಿಳಿಯದೆಯ ಅದಕ್ಕು ಕೂಡ ಅರ್ಥವಿದೆ ನೋಡಿ, ಮನಸ್ಸನ್ನು ಚುಚ್ಚುವ ಹುದುಲ ಚುಚ್ಚ್ಹುದುಲ ಆದರೆ..
ಸರಿಯಾದ ಅರ್ಥ ಸರ್.
ಹುದುಲ - ಗೋಜಲು, ಕೆಸರು, ಗೊಂದಲ
ಧನ್ಯವಾದಗಳು ಸರ್.