ಕರುಣೆಯಿಲ್ಲದ ಕಾಂಚಾಣ
ಲೋಕವನಾಡಿಸುವುದೀ ಕಾಂಚಾಣ
ನಗಿಸಿ ಅಳಿಸುವುದು ಜನರನ್ನ
ದುಡಿಸಿ ದಂಡಿಸುವುದಿದರ ಗುಣ
ಬಡವ ಬಲ್ಲಿದ ಭೇದವ ಬಿತ್ತುತ
ಬಂಧಗಳಲಿ ಬಿರುಕು ಮೂಡಿಸುತ
ಮೆರೆವುದು ತನ್ನಿಚ್ಚೆಯಂತೆ ಕಾಂಚಾಣ
ಕರುಣೆ ಪ್ರೀತಿಯ ಮರೆಮಾಚಿ
ಸ್ವಾರ್ಥದ ಹಸ್ತವ ತಾ ಚಾಚಿ
ಯಾಂತ್ರಿಕಗೊಳಿಸಿದೆ ಜನಜೀವನ
ಬರಸೆಳೆದು ಬಂಧಿಸಿದೆ ಕಾಂಚಾಣ
ಲೋಭದ ಸುಳಿಯಿದು ಜೋಪಾನ
ಮಹಲುಗಳಲಿ ತಾ ಪವಡಿಸುತ
ಜೋಪಡಿಗಳ ಅಣಕಿಸಿ ನಗುತ
ಕುಹಕವಾಡುತಿದೆ ನೋಡಿ ಕಾಂಚಾಣ
ಹಸಿದ ಹೊಟ್ಟೆ,ಹರಕು ಬಟ್ಟೆ ಕಾಣದು
ವೈಭವದೂರಲಿ ತಾ ರಾರಾಜಿಸುವುದು
ಹಿತವಚನವು ರುಚಿಸದು ಇದಕೆ
ದರ್ಪದಿ ದೀನರ ತುಳಿಯುತಲಿಹುದು
ದಾಹದ ಕೆನ್ನಾಲಿಗೆ ಚಾಚಿದೆ ಕಾಂಚಾಣ
ಮಾನವೀಯತೆಗೆ ಕುರುಡಾಗಿಹುದು
ಭ್ರಷ್ಟತೆಯ ಬೇರಾಗಿ ಹರಡಿಹುದು
ಕೈಯಲ್ಲಿ ಮಿಂಚಿ ಮಾಯೆಯ ಹೊಂಚಿ
ಬೆವರಿನ ದನಿಯ ಬರಡಾಗಿಸುವುದು
ವಂಚಿಸಿ ಲಾಸ್ಯವಾಡುವುದೀ ಕಾಂಚಾಣ
ಕರುಣೆಯಿಲ್ಲದ ಕಾಂಚಾಣ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…