ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ
ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ
ಸಂಜೆಯ ತಂಗಾಳಿಗೆ ಏನು ಗೊತ್ತು ನಿನ್ನ ಮೈ ಮನದ ಹಿತವಾದ ಸುಖ
ಗಾಳಿ ತಂಗಾಳಿಯನೆಲ್ಲ ಬಾಹು ಬಂಧನದಿ ಬಯಲೊಳಗೆ ಸಳೆದುಬಿಡು ಸಖಿ
ಮಾಗಿ ಚಳಿಗೆ ಬೆಚ್ಚಗಿನ ಹೊದಿಕೆ ನೀ ನನಗಾಗಿರಲು ನಡುಕ ನನಗೇಕೆ
ಬಿಸ್ತಾರದಿ ಪ್ರೇಮದ ರಸಧಾರೆ ಸ್ಖಲಿಸುವಂತೆ ಮಣಿದು ದಣಿದು ಬಿಡು ಸಖಿ
ಮನದ ರಂಗಸಜ್ಜಿಕೆ ಮೇಲೆ ಅಭೂತಪೂರ್ವ ಕಲ್ಪನೆಗೆ ನೂರು ಭಾವ ಬಣ್ಣ
ಮಂದಿರ ಮಸೀದಿ ನಾದ ಒಂದಾಗುವಂತೆ ಧರ್ಮ ಧಿಕ್ಕರಿಸಿ ಕುಣಿದು ಬಿಡು ಸಖಿ
ಗಂಡು ಹೆಣ್ಣೆoಬುದು ಅನಾದಿ ಕಾಲದ ಸೃಷ್ಟಿಯ ಕಣ್ಣೊಳಗಿನ ಸೊಬಗಿದು
ಮಾಗಿದ ಅಭಿಯ ಮೈಗೆ ಮೌನವಾಗಿ ಮಣಿದು ಸೇರಿಬಿಡು ಸಖಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…