ವಿದ್ವತ್ತು ಮತ್ತು ವಿಚಾರವಂತಿಕೆ ಎರೆಡನ್ನೂ ತಮ್ಮ ಬರಹಗಳ ಮೂಲಕ ಓದುಗರ ಭಾವ ಬುದ್ದಿಗಳಿಗೆ ಉಣಬಡಿಸಿದ ಬಾಣಸಿಗ ಕಿರಂ ಕನ್ನಡ ಕಾವ್ಯ ಪರಂಪರೆಯೊಂದಿಗಿನ ಅನುಸಂಧಾನಕ್ಕೆ ಕಿರಂ ನಿರ್ದೇಹಿಯಾಗಿದ್ದುಕೊಂಡೇ ನಿರ್ಮೋಹಿಯಂತೆ ನಮ್ಮನ್ನು ಅಣಿಗೊಳಿಸುತ್ತಿರುವುದು, ಆ ಮೂಲಕ ಹೊಸ ಸಂವೇದನೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತಿರುವುದು ಯಾವ ಪವಾಡಗಳಿಗೂ ಕಡಿಮೆ ಇಲ್ಲವೆಂದರೆ ಅತಿಶಯೋಕ್ತಿಯ ಮಾತಲ್ಲ. ಕಾವ್ಯವನ್ನೇ ಉಂಡುಟ್ಟು, ಉಸಿರಾಡಿದ ಕಿರಂ ವಿಮರ್ಶೆಯ ದೃಷ್ಟಿಗಳು ಮತ್ತು ಪಂಥಗಳ ನಡುವೆ; ವಿಧಾನಗಳು ಮತ್ತು ಪಂಥಗಳ ನಡುವೆ; ಪ್ರಜ್ಞೆಗಳು ಮತ್ತು ಪಂಥಗಳ ನಡುವೆ ಇರುವ ಬಹುಮುಖಿ ವ್ಯತ್ಯಾಸಗಳನ್ನು ಗ್ರಹಿಸಿದವರು.
ಮನುಷ್ಯ ಸಂಬಂಧಗಳು ಜಾತಿ-ಧರ್ಮ-ಪಂಥ-ಪಕ್ಷಗಳ ನಂಜನುಂಡು ಕೋಮಾ ಸ್ಥಿತಿಗೆ ತಲುಪಿರುವ ಇಂತಹ ದುರಿತ ಕಾಲದಲ್ಲಿ ಸಾಹಿತ್ಯ ಸಂಜೀವಿನಿ ಯ ಮೂಲಕ ಪುನರುಜ್ಜೀವಕ್ಕೆ ಶ್ರಮಿಸಿದ’ಕಿರಂ’ ಅವರಂತಹ ಸಾಹಿತ್ಯ ವಿಚಾರೋದ್ದಾರಕರ ಕೊರೆತೆ ನಮಗೆಲ್ಲ ಕಾಡದೆ ಇರದು. ಸಾಹಿತ್ಯ ಚಳುವಳಿಗಳು ಕಾಣೆಯಾಗಿ, ಸಾಹಿತ್ಯ ಹಿಡುವಳಿಗಳೇ ನಮ್ಮ ನಡುವೆ ಸಹಜ ನಡಾವಳಿಗಳಂತೆ ಹೆಜ್ಜೆ ಹೆಜ್ಜೆಗೆ ಎದುರಾಗುತ್ತಿರವಾಗ ಕೀರಂ ನಮ್ಮಗಳ ಎದೆಯಲ್ಲಿ ಅನುರಣಿಸುತ್ತಾರೆ ಒಂದಷ್ಟು ಸಮಾಧಾನದ ಸಂಗತಿ.
ಕಾವ್ಯದ ಪರಿಭಾಷೆ, ಪ್ರಕಾರ,ವಿಮರ್ಶೆಯ ಸಂವೇದನೆ, ಕಾಲಘಟ್ಟ, ದೃಷ್ಟಿಕೋನ-ವಿಧಾನ, ಪಂಥಗಳನ್ನೆಲ್ಲ ನಮ್ಮಲ್ಲಿ ಕಲಸಿಕೊಳ್ಳಲಾಗಿದೆ. ಇದರಿಂದ ಕನ್ನಡ ಕಾವ್ಯವೂ, ವಿಮರ್ಶೆಯೂ ಬಿಡಿಸಿಕೊಳ್ಳಬೇಕಾಗಿದೆ. ಇವುಗಳನ್ನೆಲ್ಲ ಸ್ಪಷ್ಟಪಡಿಸಿಕೊಂಡ ಕಾವ್ಯ ವಿಮರ್ಶಾ ಚರಿತ್ರೆಯೊಂದರ ಕಟ್ಟುವಿಕೆ ಇಂದಿನ ಅಗತ್ಯವಾಗಿದೆಎಂಬ ಘನಸತ್ಯ ಕಿರಂ ಒಡನಾಡಿಗಳಾದಿಯಾಗಿ ಅವರ ಶಿಷ್ಯರು, ಅಭಿಮಾನಿಗಳಿಗೆ ಅರಿವಿದೆ. ಆಯೋಜನೆಯ ಹಿಂದಿರುವ ಮಹತ್ತರ ಉದ್ದೇಶವೆ ಇಂತಹ ಅರಿವಿನ ಗುರುವಾದ ಕಿರಂ ರನ್ನು ಕಾಲ ಕಾಲಕ್ಕೆ ಮನನ, ಧ್ಯಾನ ಮಾಡಲೋಸುಗ ಅಕ್ಷರ ವ್ಯಾಪಾರಿಗಳೆಲ್ಲ ಒಂದೆಡೆ ಸೇರಿ ಸೇರುವ ಕಾವ್ಯ ಕಾರ್ಣಿಕಕ್ಕೆ ನಾಡಿನ ಸಂಗೀತ-ಸಾಹಿತ್ಯ-ಕಲಾ ರಸಿಕರೆಲ್ಲರಿಗೂ ಆಹ್ವಾನವಿದೆ.
ಇತರೆ Steriotypic ಕವಿಗೋಷ್ಠಿಗಳಿಗಿಂತ ವಿಶಿಷ್ಟವಾಗಿಯೂ ವಿಭಿನ್ನವಾಗಿಯೂ ನಡೆಯುತ್ತದೆ. ಅನುಸಂಧಾನಾತ್ಮಕವಾಗಿ ಕವಿತೆ ಮತ್ತು ವಿಮರ್ಶೆ ಕೈಕೈ ಹಿಡಿದು ಸಾಗುವ ಸುಯೋಗ ಒದಗಿಸಿಕೊಡುವುದರ ಮೂಲಕ ಇಂದಿನ ಕಾಲದ ಕವಿತೆಗಳು ವಿಮರ್ಶೆಯ ಮಿಸುನಿಯಲ್ಲಿ ಮಿಂದು ಫಳಫಳನೆ ಹೊಳೆವಂತೆ ಮಾಡುವಲ್ಲಿಯೂ ಕಳೆದ ಹತ್ತು ವರ್ಷಗಳಲ್ಲಿ ‘ಕಾಡುವ ಕಿರಂ’ ಒಮ್ಮೆಯೂ ಹಿಂದೆ ಬಿದ್ದಿಲ್ಲ.
ಲಂಕೇಶರ ಅಕ್ಷರ ಹೊಸ ಕಾವ್ಯಕ್ಕೆ ಸಮನಾಗಬಲ್ಲ ಅಂಥಾಲಜಿಗಳು ನಾನು ಗಮನಿಸಿದಂತೆ ಬಂದದ್ದು ಕಿರಂ ಬಳಗದಿಂದ ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಇದರ ಹಿಂದೆ ಸಹೃದಯಿ ಮಿತ್ರರಾದ ಸೂರ್ಯಕೀರ್ತಿ ಹಾಗು ಶಂಕರ್ ಸಿಹಿಮೊಗ್ಗೆ ಆದಿಯಾಗಿ ಕಿರಂ ಬಳಗ ಹಗಲಿರುಳೂ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ನಾಡಿನ ಎಲ್ಲ ಕಾವ್ಯಸಕ್ತ ಮನಗಳ ಪರವಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯ
ಎಂದು ನಾನು ಭಾವಿಸುತ್ತೇನೆ.
ಆಗಸ್ಟ್ ೭ರ ಸಂಜೆ ೬:೦೦ ರಿಂದ ಪ್ರಾರಂಭವಾಗುವ ಅಹೋರಾತ್ರಿ ಕಾರ್ಯಕ್ರಮದಲ್ಲಿಒಟ್ಟು ಐದು ಗೋಷ್ಠಿಗಳು, ಪ್ರತಿ ಗೋಷ್ಠಿಯಲ್ಲಿ ತಲಾ ಇಪ್ಪತ್ತು ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದು ಕವಿಗೋಷ್ಠಿಯ ಅಧ್ಯಕ್ಷರೆ ಆಯಾ ಗೋಷ್ಠಿಯ ಅನುಸಂಧಾನವನ್ನು ನಡೆಸಿಕೊಡಲಿದ್ದಾರೆ. ಹೀಗೆ ನೂರು ಕವಿತೆಗಳಿಗೆ ನಾಡಿನ ಸಹೃದಯರೆಲ್ಲರೂ ಅಂದು ಕಿವಿಗಳಾಗುತ್ತಿದ್ದಾರೆ.ಏಕತಾನತೆಯನ್ನು ನೀಗಿಸಲು ನಾಟಕ, ಜನಪದ ಗಾಯನ ಮತ್ತು ಕಲಾಪ್ರದರ್ಶನಗಳು ಮೇಳೈಸಿರುವುದು ಕಾರ್ಯಕ್ರಮದ ವಿಭಿನ್ನತೆಗೆ ಸಾಕ್ಷಿ.
ಬನ್ನಿ ಕನ್ನಡ ಕಾವ್ಯವನ್ನು ಅರಿಯೋಣ, ಕನ್ನಡ ಕಾವ್ಯದ ಹೆಸರಲ್ಲಿ ಬೆರೆಯೋಣ.
ಮೇಲೋಗರ: ಪಂಪ ಯುಗ, ಬಸವ ಯುಗ, ಕುಮಾರ ವ್ಯಾಸ ಯುಗ, ಕುವೆಂಪು ಯುಗ, ಇಂಥ ಕಾಲಕ್ರಮದ ಸಾಹಿತ್ಯ ವರ್ಗೀಕರಣವನ್ನು ಒಪ್ಪದ ಕಿ.ರಂ. ಒಮ್ಮೆ ಹೇಳಿದ್ದು: ” ನಾನು ಇಂದು,ಇಲ್ಲಿ, ಈ ಕ್ಷಣದಲ್ಲಿ ಪಂಪನನ್ನು ಓದುವಾಗ ಅವನು ನನಗೆ ಆದಿಕವಿಯಾಗಿ, ಹಳಗನ್ನಡದ ಕವಿಯಾಗಿ ಕಾಣುವುದಿಲ್ಲ. ಇಂದಿನ, ಇಲ್ಲಿಯ ಈ ಕ್ಷಣದ ಕವಿಯಾಗಿ ಕಾಣುತ್ತಾನೆ”. ಅದೆಂಥಹ ಸತ್ಯ. ಅಲ್ಲವೇ. ನೀವೆನಂತೀರಿ?
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…