ಕವಿತೆಗಳು

ಶಾರದಾ ರಾಮಚಂದ್ರ ಅವರು ಬರೆದ ಕವಿತೆ ‘ಒಲವ ಲತೆ’

ಒಲವ ಬಳ್ಳಿಯು ನೀನು
ನಿಂತಮರವದು ನಾನು
ತಬ್ಬಿ ಹಬ್ಬುತಲಿ ನನ್ನ
ಬದುಕ ಪೂರ್ಣತೆ ಗೊಳಿಸು..

ಬಿಡಿಸಿ ಚಾಚಿಹೆ ನಾನು
ನನ್ನೆಲ್ಲ ತೋಳುಗಳ
ಅಲಂಗಿಸು ನನ್ನ
ಮಧುರ ಲತೆಯಲಿ ನಿನ್ನ..

ನೂರಾರು ತರುಲತೆಯು
ಹೂವರಳಿ ಬಾಗಿಹುದು
ಹೆಣೆ ಹೆಣೆದು ಜೋಡಿಸುತ
ಬಂದಿಯಾಗಿಸು ನನ್ನ..

ನಿಂತ ನಿಲುವಲ್ಲೇ ಇಹೆನು
ಕನಸು ಕಾಣುತ್ತಲಿರುವೆ
ಒಲವ ಸುರಿಸುತ ನೀನು
ಉಸಿರು ಗಟ್ಟಿಸು ಸುತ್ತಿ..

ಅಚೀಚೆ ಗಿಡ ಗಂಟಿಗಳು
ನೋಡಿ ಉರಿಯಲಿ ಒಳಗೆ
ಸುತ್ತುತಲೆ ನೀ ನನ್ನ
ಅತಿಕ್ರಮಿಸು ಬುಡ ತುದಿಗೆ..

ಬಂದು ಆಶ್ರಯ ಪಡೆದ
ಒಡನಾಡಿಗಳು ಬಹಳ
ಒಲವ ಸುಖ ಸಿಕ್ಕಿಹುದು
ನಿನ್ನ ಸ್ಪರ್ಶದ ಹಿತದಿ..

ಹಿತವಾಗಿ, ಮೃದುವಾಗಿ
ಹಬ್ಬುತಿರು ಕಣಕಣದಿ
ಒಲವಾಗಿ, ನವಿರಾಗಿ
ಸುಖವಾಗಿ ಬಾಂದಳದಿ..

SHANKAR G

View Comments

  • ಒಲವ ಬಳ್ಳಿ ಹಬ್ಬುವ ಪರಿ ಸೊಗಸಾಗಿದೆ.

  • ಒಲವ ಲತೆ ತಬ್ಬುವ ಪರಿ ಸುಮಧುರ.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago