ಸಾಹಿತ್ಯ ಸುದ್ದಿ

ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕು : ಅಮರೇಶ ನುಗಡೋಣಿ

ಜಿಲ್ಲಾ ಕಸಾಪ ಕಥಾ ಕಮ್ಮಟ
ರಾಯಚೂರು ಜು 16

ಕಥೆಗಳನ್ನು ಬರೆಯುವ ಮೊದಲು ಅದರ ಸಾರಾಂಶ ಅರಿತು, ಕೇಡುಗಳನ್ನು ವರ್ತಮಾನದ, ವಿದ್ಯಮಾನಗಳ ಪ್ರವೃತರಾಗಬೇಕು, ಸುಳ್ಳು ಸುದ್ದಿ, ವದಂತಿಗಳನ್ನು ಮೆಟ್ಟಿ ಕಥೆಯ ಸತ್ಯವನ್ನು ಅರಿತು, ಸುಳ್ಳಿಗೆ ಪ್ರತಿರೋಧದ ವಿರುದ್ಧ ಬರೆಯಬೇಕು, ಕಥೆಯಲ್ಲಿ ಸತ್ಯತೆಯಿರಲಿ, ಕೆಲವು ಸಾಮಾಜಿಕ ಜಾಲತಾಣದ ವರದಿಗಳು ಸುಳ್ಳು ಇರುವದು, ಅದನ್ನು ತಿಳಿದಿಕೊಂಡು, ಪ್ಯಾಶನ್ ಗಾಗಿ ಕಥೆಯನ್ನು ಬರೆಯದೆ, ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಕಥೆಗಳು ಬರೆಯಬೇಕು, ನಮ ಪ್ರಾಂತ್ಯದ, ಜಿಲ್ಲೆ ಘಟನೆಗಳನ್ನ ಸೇರಿಸಿ ಬರೆಯಬೇಕು,ಸತ್ಯದ ಕಥೆಗಳು ಹೊರಹೊಮ್ಮಬೇಕು, ಕತೆಗಳು ಜೀವಂತಿಕೆಯನ್ನು ಉಳಿಯಬೇಕು ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕೆಂದು ಹಿರಿಯ ಸಾಹಿತಿ ಹಾಗೂ ಕಥೆಗಾರರಾದ ಡಾ.ಅಮರೇಶ ನುಗಡೋಣಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಕಥೆ ರಚನೆಯ ಕುರಿತು ವಿಶೇಷವಾಗಿ ಮಾರ್ಗದರ್ಶ ಮಾಡಿದ ಹಿರಿಯ ಕಥೆಗಾರರಾದ ಅಮರೇಶ ನುಗಡೋಣಿ ಮಾತಾನಾಡುತ್ತಾ ಯಾವುದೇ ಒಬ್ಬ ಮನುಷ್ಯನಲ್ಲಿ ಹುಟ್ಟುತ್ತಲೆ ಮೊಳಕೆಯೊಡೆಯದ ಬೀಜವನ್ನಿಟ್ಟುಕೊಂಡು ಜನಿಸಿರುತ್ತಾರೆ ನಾವು ವಯಸ್ಕರಾಗುತ್ತಿದ್ದಂತಯೇ ಬೀಜ ಮೊಳಕೆಯೊಡೆಯಲು ಆರಂಭಿಸುತ್ತದೆ ನಮ್ಮಯ ಮನಸ್ಸು ದಿಕ್ಕಿನಲ್ಲಿ ಯೋಚನೆಯ ಆರಂಭವಾಗುತ್ತಿದ್ದಂತೆ ತಕ್ಷಣ ನಮ್ಮ ಕೌಶಲ್ಯ ಆರಂಭವಾಗುತ್ತದೆ ಇದರಿಂದಾಗಿಯೇ ನಿಮಗೆ ಕಥೆ ಬರೆಯುವಷ್ಟು ಬುದ್ದಿ ಶಕ್ತಿ ಆರಂಭವಾಗುತ್ತದೆ ಇದನ್ನು ಅರಿತುಕೊಂಡ ನಾವುಗಳು ಸಾಗಿದಾಗ ಮಾತ್ರ ನಾವು ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಥಾ ಕಮ್ಮಟ ಕಾರ್ಯಕ್ರಮವನ್ನು ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಶಿಬಿರದ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಕುರಿತು ಕಸಪಾ ಮಾಜಿ ಜಿಲ್ಲಾಧ್ಯಕ್ಷ ಮಹಾತೇಶ ಮಸ್ಕಿ ಮಾತಾನಾಡಿದರು.

ತಾಲೂಕು ಕಸಾಪ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಾಯಪ್ಪ ಹೊಸೂರು ಸ್ವಾಗತವನ್ನು ಮಾಡಿದರು, ಬಿ. ವಿಜಯ ರಾಜೇಂದ್ರ ನಿರೂಪಣೆಯ ಕಾರ್ಯ ಅಚ್ಚುಕಟ್ಟಾಗಿ ಮಾಡಿದರು,ದಂಡಪ್ಪ ಬಿರಾದಾರ, ಕಾರ್ಯಕ್ರಮದಲ್ಲಿ,ಮಂಜುನಾಥ್ ಕಾಮಿನ್, ರಾವುತರಾವ್ ಬರೂರ, ಡಾ. ಯೇಶಪ್ಪ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಕಥಾಕಮ್ಮಟದ ಶಿಬಿರಾರ್ಥಿಗಳು,ಸಾಹಿತಿಗಳು ಹಾಗೂ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಎನ್. ಎಸ್. ಎಸ್ . ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಣ್ಣ ಪಾಟೀಲ್ ಕಸಾಪ ಜಿಲ್ಲಾಧ್ಯಕ್ಷರು ರಾಯಚೂರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಬಿ. ಎಂ. ಶರಬೇಂದ್ರ ಸ್ವಾಮಿ ಹಿರಿಯ ಸಾಹಿತಿಗಳು ವಿಶ್ರಾಂತ ಮುಖ್ಯಸ್ಥರು ಆಕಾಶವಾಣಿ ರಾಯಚೂರು, ಮಹಾಂತೇಶ್ ಮಸ್ಕಿ ಮಾಜಿ ಜಿಲ್ಲಾ ಅಧ್ಯಕ್ಷರು ಕಸಾಪ ರಾಯಚೂರು, ಡಾ.ಎಂ. ಎಸ್.ಅಯ್ಯನಗೌಡ ಡೀನ್ ಪ್ರಭಾರಿ ಕೃಷಿ ತಾಂತ್ರಿಕ ವಿಶ್ವವಿದ್ಯಾಲಯ ರಾಯಚೂರು,ಹಿರಿಯ ಸಾಹಿತಿ ಅಂಜಿನಯ್ಯ ಜಾಲಿಬೆಂಚಿ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರು, ಬಸವಕೇಂದ್ರ ಉಪಾಧ್ಯಕ್ಷ ವಿಜಯ್ ಕುಮಾರ್ ಸಜ್ಜನ್, ಹಿರಿಯ ಸಾಹಿತಿ ವೀರಹನುಮಾನ್, ಹೆಚ್ ಹೆಚ್ ಮ್ಯಾದಾರ್, ಎನ್.ನರಸಪ್ಪ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್, ಸಿರಿವಾರ ತಾಲೂಕ ಕಸಾಪ ಅಧ್ಯಕ್ಷ ಸುರೇಶ ಹೀರಾ, ಅಣ್ಣಪ್ಪ ಮೇಟಿಗೌಡ, ಕವಿಗಳಾದ ಚಂದ್ರಶೇಖರ ಮದ್ಲಾಪೂರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago