ಮುಪ್ಪಾದ ತಂದೆ ತಾಯಿಯ
ತುತ್ತಿನ ಚೀಲ ತುಂಬಿಸಲು
ಮೈ ಮಾರಿಕೊಂಡವಳನು
ಕರೆಯದಿರಿ ವೇಶ್ಯೆಯಂದು….!
ಅಸಹಾಯಕ ತಂಗಿ ತಮ್ಮಂದಿರನು
ವಿದ್ಯಾವಂತರನ್ನಾಗಿಸಲು
ಬೆತ್ತಲಾದವಳ ಕರೆಯದಿರಿ
ವೇಶ್ಯೆಯೆಂದು….!
ಬಾಣಲೆಯಲ್ಲಿ ಸುಟ್ಟು ಕರಕಲಾದ
ಎಣ್ಣೆಯಂತೆ ತನ್ನ ಕುಟುಂಬವ
ಸಲಹುವುದಕ್ಕಾಗಿ ಯೌವ್ವನವನ್ನೇ
ಬಸಿದವಳ ಕರೆಯದಿರಿ ವೇಶ್ಯೆಯಂದು….!
ಬಡತನದ ಬೆಂಕಿಯಲಿ ತಾ ಬೆಂದು
ತನ್ನವರ ಬಾಳಿಗೆ ಬೆಳಕಾಗಿಹಳು
ಇಂತಹ ತ್ಯಾಗಮಯಿ ಹೆಣ್ಣನ್ನು
ಕರೆಯದಿರಿ ವೇಶ್ಯೆಯಂದು….!
ಪರಿಸ್ಥಿತಿಯ ಕೈಗೊಂಬೆಯಾಗಿ
ಬಿದ್ದಳವಳು ಈ ನರಕದೊಳಗೆ
ವಿಧಿಯಾಟಕ್ಕೆ ತಲೆಬಾಗಿ ಕೊನೆಗೆ
ಜರಿಯದಿರಿ ಅವಳನು ವೇಶ್ಯೆಯಂದು….!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…