ಒಮ್ಮೊಮ್ಮೆ ನೀನು ಹಿಮಪಾತದಂತೆ
ಗೋಚರಿಸುತ್ತಿ,
ಒಮ್ಮೊಮ್ಮೆ ಜ್ವಾಲಾಮುಖಿಯಂತೆ
ಏಕೆಂದು ಅರಿಯುವ ಹಠ ನನಗಿಲ್ಲ
ಹಿಮ ಹಾಗೂ ಬೆಂಕಿ ಎರಡನ್ನೂ
ನನ್ನ ಮೇಲೆ ಸುರಿದುಕೊಂಡಿರುವೆ
ಅವು ಎಲ್ಲವನ್ನೂ ಸಹಿಸುವ
ಎಲ್ಲವನ್ನೂ ಪ್ರೀತಿಸುವ
ದಾರಿಯನ್ನು ಕಾಣಿಸಿವೆ
*ಕವಿ ವಿಜಯಲಕ್ಷ್ಮೀ ಸತ್ಯಮೂರ್ತಿ*
ಮನಸ್ಸು ಕುಗ್ಗಿ ಶಿಥಿಲಗೊಂಡಾಗ
ಪ್ರೀತಿಯ ಜ್ವಾಲಾಮುಖಿ ನೀನಾಗಿ
ಸ್ಫೋಟಿಸುತ್ತೀ ನನ್ನೊಳಗೆ
ಸುಡು ನೋವಿಗೆ ಹಿಮಮಣಿಯಾಗಿ
ಉದುರುತ್ತಾ ಹೋಗುತ್ತೀ
ಮೇಲಿಂದ ಮೇಲೆ ಜಾರುತ್ತಾ ನನ್ನೊಳಗೆ
ವಿಸ್ಮಯ ಎನಿಸಿಬಿಡುವುದು ನನಗೆ
ಕೆಂಡದುಂಡೆಗಳ ಜೊತೆಗೆ
ಹಿಮದ ಮಣಿಗಳನ್ನೂ ಜೊತೆಯಾಗಿ
ಹುದುಗಿಸಿಕೊಂಡಿರುವುದರ ಗುಟ್ಟನ್ನು
ರಟ್ಟು ಮಾಡುವುದಾದರೂ ಹೇಗೆ?
ಈ ಅಸಲೀಯತ್ತು
ಯಾರಿಗೆ ತಿಳಿಯಲು ಸಾಧ್ಯ
ಆ ರಂಗಾದ ಜಗತ್ತು ನೀನೇ ಎಂಬುದು
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…