ಕವಿತೆಗಳು

ವಿಶಾಲ್ ಮ್ಯಾಸರ್ ಅವರು ಬರೆದ ಕವಿತೆ ‘ಮೂರು ತಲೆಮಾರು ಮತ್ತು ಬದುಕ ಬಂಡಿ’

ಸುತ್ತುತ್ತವೆ ಗಾಲಿಗಳು ಕಾಲ ಬದಲಾದಂತೆ
ಇಲ್ಲಾ ಬದಲಾಗುತ್ತವೆ ಕಾಲಗಳು ಗಾಲಿ ತಿರುಗಿದಂತೆ

ಅಡ್ಡಗಾಲು ಹೊಡೆಯುತ್ತಾ ಸೀಟು ಏರುವ ಸೈಕಲ್ಲು
ಕಿರ್ ಕಿಟಾರ್ ಕಿರ್ ಎನ್ನುವ ಟಿವಿಎಸ್,ಲೂನಾ
ಬಡ್ ಬಡ್ ಬಡ್ ಎಂದು ದಾರಿ ನಡುಗಿಸುವ ರಾಯಲ್ ಎನ್ಫೀಲ್ಡ್

ತಿರುಗುತ್ತವೆ ಬದುಕುಗಳು

ಚಲಿಸುತ್ತವೆ ರಸ್ತೆಗಳು ಮೇಲಿನದ್ದು ಕೆಳಗೆ
ಕೆಳಗಿನದು ಮೇಲೆ
ಎಲ್ಲವೂ ಕಲಬೆರಕೆ
ಬದುಕು ಮಾತ್ರ ಪ್ರತ್ಯೇಕ

ಬದಲಾಗುತ್ತವೆ ಬಂಡಿಯ ಅಳಲು

ತುಂಬಿಕೊಂಡು ತರಕಾರಿ ಹಂಪಲು
ಚಳಿ ಗಾಳಿ ಮಳೆ ಬಿಲಿಸು
ದೇವರು ದಿಂಡಿರು
ಓದಿದ್ದೆಲ್ಲವು ಪೊಟ್ಟಣ ಕಟ್ಟಲಿಕ್ಕೆ
ಅಳಲು ಬಂಡಿ ನಡೆಸಲಿಕ್ಕೆ

ಬರೆಯುತ್ತವೆ ಕೈಗಳು

ಹುದುಗಿ ಹೋದ ಕತೆಗಳನು
ತಲೆಮಾರಿಗುಂಟ ಮೆಲ್ಲ ಮೆಲ್ಲನೆ ಗಿರಕಿ ಹೊಡೆಯುವುದನ್ನು
ಹಸಿವ ಹೊತ್ತು ತಳ್ಳುವುದನ್ನು

ಮಣ ಮಣ ಬರೆಯುತ್ತವೆ
ಸೊರ್ ಸೊರ್ ಕಾಫಿ ಹೀರುತ್ತಾ
ಕಾಪಿ ಮಾಡುತ್ತವೆ ಅಚ್ಚುಕಟ್ಟಾಗಿ
ಹೇಳುತ್ತವೆ ಸುದ್ದಿ ಬಳಸಿ

ಸುದ್ದಿ ಬಳಸಿ ಸುದ್ದಿ ತಿಳಿಸಿ
ಮತ್ತದೇ ಗಾಲಿ ತಿರುಗಿದಂತೆ
ತಿರುಗ ಮುರುಗ
ಆದರೆ ಬದುಕಲಿಲ್ಲ ಬದುಕಲಿಲ್ಲ

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago