(೧)
ಗುಂಡನ ಅಂಗಡಿ
ಊರಮುಂದಿನ ಶಾಲೆಯ ಎದುರು
ಗುಂಡ ಅಂಗಡಿ ತೆರೆದಿದ್ದ
ಅಂಗಡಿ ಮುಂದೆ ದೊಡ್ಡದೊಂದು
ಬೋರ್ಡು ನೇತುಹಾಕಿದ್ದ
“ನಗದಿ ಪ್ರೇಮ ಸಂಗ – ಉದ್ರಿ
ಮಾನಭಂಗ” ಅಂತ್ ಬರೆಸಿದ್ದ
ನಗದಿ ಹುಡುಗರು ಬರುತಿದ್ರು
ಉದ್ರಿ ಹುಡುಗರು ಬೈತಿದ್ರು…
(೨)
ನಂದು ಚಂದು
ನಂದು ಚಂದು ಜೀವದ ಗೆಳೆಯರು
ಆಟದ ಬಯಲಿಗೆ ಬಂದ್ಬಿಟ್ರು
‘ಫುಟ್ಬಾಲ್ಆಡುತ’ ಓಡುತ ಬಿದ್ದಾ-
ನೋವಿನಲಿ ಜಗಳಾಡ್ಕೊಂಡ್ರು
ದೋಸ್ತಿ ಠುs ಠುs ಬಿಟ್ಬಿಟ್ರು
ರಾತ್ರಿ ಕನವರಿಸುತ್ತಿದ್ರು…
ಊರ ಜಾತ್ರೆಯಲಿ ಪೀ ಪೀ ಬದಲಿಸಿ
ದೋಸ್ತಿ ‘ರಿs ನ್ಯೂ’ ಮಾಡ್ಕೊಂಡ್ರು…
(೩)
ಕಿಲಾಡಿ ಕಿಟ್ಟ
ಕಿಟ್ಟ ಕಿಟ್ಟ ಕಿಲಾಡಿ ಕಿಟ್ಟ
ಹೋಟೆಲ್ನೊಳಗೆ ಬಂದ್ಬಿಟ್ಟ
ಎರಡೆರ್ಡ್ ಪ್ಲೇಟು ಪುಗ್ಗಿ ತಿಂದು
ಬಿಕ್ಕಳಿಸುತ ಮನೆಗೋಡ್ಬಿಟ್ಟ…
ಬಾಯಿಗೆ ಖಾರ ಹತ್ಬಿಟ್ತು
ಕಣ್ಣಲಿ ನೀರು ಬಂದ್ಬಿಟ್ತು…
ಎಂದೂ ಪುಗ್ಗಿ ತಿನ್ಬಾರ್ದಂದ
ಲಾಡೂ ತಿಂದು ನಕ್ಬಿಟ್ಟ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…