ಮಕ್ಕಳ ಸಾಹಿತ್ಯ

ಚಂದ್ರಗೌಡ ಕುಲಕರ್ಣಿ ಅವರು ಬರೆದ ಮಕ್ಕಳ ಕವಿತೆ ‘ಪಂಚ ತಂತ್ರದ ಪ್ರಶ್ನೆ’

 

ಗಾಳಿ ಬಂದರೆ ಮಣ್ಣಿನ ಹೆಂಟೆ
ತರಗೆಲೆ ಮೇಲೆ ಕುಳಿತು !
ಜೀವದ ಗೆಳೆಯನ ರಕ್ಷಿಸುತಿದ್ದಿತು
ಅನುಪಮ ಪ್ರೀತಿಗೆ ಸೋತು !

ಮಳೆಯು ಸುರಿದರೆ ಗಿಡದ ತರಗೆಲೆ
ಮಣ್ಣಿನ ಹೆಂಟಿಗೆ ಮುಚ್ಚಿ !
ಆಪ್ತ ಮಿತ್ರನ ಸಲಹುತಿದ್ದಿತು
ನಿರ್ಮಲ ಗುಣವನು ಮೆಚ್ಚಿ !

ಹೇಳುವ ಕತೆಯಲಿ ಗುರುಗಳ ಮಾತು
ಮುಗಿದಿರಲಿಲ್ಲ ಇನ್ನು !
ಮೂವರು ರಾಜ ಕುವರರು ಆಗಲೆ
ಕೇಳಲು ಪ್ರಶ್ನೆಯನ್ನು !

ನಿಮ್ಮಯ ಕಲಿಕೆಯು ಇಂದಿಗೆ ಮುಗಿಯಿತು
ಮರಳಿರಿ ರಾಜ್ಯಕೆ ಬೇಗ !
ರಾಜ್ಯವನಾಳುವ ಯೋಗ್ಯತೆ ಪಡೆದಿರಿ
ಆರೇ ತಿಂಗಳದಾಗ !

ಹೇಗೆ ಇತ್ತು ನೋಡಿ ತಿಳಿಯಿರಿ
ಅಂದಿನ ಪರೀಕ್ಷೆ ರೀತಿ !
ಉತ್ತರ ಬರೆಯುವುದಲ್ಲ ಬೇಕು
ಪ್ರಶ್ನೆ ಕೇಳುವ ಛಾತಿ !

ಕುವರರು ಏನನು ಕೇಳಿರಬಹುದು
ಎಂಬುದು ಇಲ್ಲಿಯ ಗುಟ್ಟು !
ಪ್ರತಿ ಉತ್ಪನ್ನ ಮತಿಗೆ ಹೊಳೆವುದು
ಬಿಡಿಸಲಾರದ ಒಗಟು !

“ಮಳೆಯು ಗಾಳಿಯು ಏಕಕಾಲಕೆ
ಬಂದರೆ ಹೇಗೆ ಗುರುವೆ ” !
ಮೂವರು ಒಮ್ಮೆಲೆ ಎದ್ದು ನಿಲ್ಲುತ
ಕೇಳಿದ ಪ್ರಶ್ನೆ ಇದುವೆ !

ಪ್ರಶ್ನೆ ಮನದಲಿ ಮೂಡಿ ಬರದಿರೆ
ಉತ್ರಕೆ ಜಾಗ ಎಲ್ಲಿ !
ಅರಿಯಲು ನಿಜವನು ಪ್ರಶ್ನೆಯೆ ಬೀಜ
ಎಂಬುದು ಅಡಗಿದೆ ಇಲ್ಲಿ !

ಆಚೆ ಈಚೆಗೆ ಅಂಚನು ಸಿಗಿಸಿ
ಹೆಂಟೆಗೆ ಹೊದಿಕೆ ಹಾಕಿ !
ತಾನೂ ಗಾಳಿಗೆ ಹಾರದೆ ಉಳಿವುದು
ತರಗೆಲೆ ಪಕ್ಕಾ ಬೆರಿಕಿ !

ಪಂಚತಂತ್ರದ ಅಂತಿಮ ಕತೆಯಿದು
ಗುಡಿಯ ಗೋಪುರ ಕಳಸ !
ಪ್ರಶ್ನೆ ಎಂಬುದು ವಿದ್ಯೆ ಶರೀರದ
ಉಸಿರಿನ ಶ್ವಾಸೋಚ್ಛ್ವಾಸ !

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago