ವಿಮರ್ಶೆಗಳು

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವಾಗಲಿ..! – ವಿಜಯಲಕ್ಷ್ಮೀ ಹೊಸಪೇಟೆ

ಬಡವರ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲೆಗಳ ಸ್ಥಿತಿ ರಾಜ್ಯದಲ್ಲಿ ಅಯೋಮಯವಾಗಿದೆ. ಏಕೆಂದರೆ ಸರ್ಕಾರಿ ಶಾಲೆಗಳು ಎಂದಾಗಲೆಲ್ಲಾ ಜನರು ಭಾವಿಸುವುದು ಮುರಿದ ಛಾವಣಿ, ಕಳಪೆ ಮೂಲಸೌಕರ್ಯ, ಅಸ್ಥಿರ ಶಾಲಾ ವ್ಯವಸ್ಥೆ ಮತ್ತು ಶಿಕ್ಷಕರಿಲ್ಲ ಎಂದು ಹೇಳಲಾಗುತ್ತದೆ.

ಅದರಲ್ಲಿ ನಮ್ಮೂರು ಶಾಲೆಯು ಒಂದು. ನಮ್ಮ ಊರಿನ ಶಾಲೆಯನ್ನು ಮಾಲಿನ್ಯ, ಶಬ್ದ, ಕೊಳಕು ಇರುವ ರೋಡ ಪಕ್ಕದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದರಿಂದ ಮಕ್ಕಳು ಶಾಂತಿಯುತ ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಶಾಲೆಯಲ್ಲಿ ಮೊದಲು ಅನೇಕ ಮರಗಳಿದ್ದವು. ಅದರ ನೆರಳಿನಲ್ಲಿ ಮಕ್ಕಳು ಊಟದ ಸಮಯದಲ್ಲಿ ಒಟ್ಟಿಗೆ ಕುಳಿತು ಊಟವನ್ನು ಮಾಡುತ್ತಿದರು. ಆದರೆ ಈಗ ರೋಡುಗಳನ್ನು ದೊಡ್ಡದಾಗಿ ಮಾಡಿ ಇದ್ದಿದ್ದ ಮರಗಳನ್ನೆಲ್ಲ ಕಡಿದು ಹಾಕಿದ್ದಾರೆ. ಮಕ್ಕಳು ಹೊರಗಡೆ ಬಂದು ಆಟ ಆಡಲು, ಅಥವಾ ಊಟ ಮಾಡಲು ಕುಳಿತುಕೊಳ್ಳಲು, ನೆರಳೆ ಇಲ್ಲದಂತಾಗಿದೆ. ಕೇವಲ ಶಿಥಿಲಗೊಂಡ ಕಟ್ಟಡ ಮಾತ್ರವಲ್ಲ ಸಾವಿರಾರು ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವೂ ಇಲ್ಲ. ಆಟದ ಜೊತೆಗೆ ಕಲಿಕೆಯು ಇದ್ದರೆ ಮಕ್ಕಳು ತುಂಬಾ ಖುಷಿಯಿಂದ ಪಾಠವನ್ನು ಕೇಳುತ್ತಾರೆ. ಮತ್ತೆ ನಮ್ಮ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಓದಲು ಒಂದು ಗ್ರಂಥಾಲಯವು ಸಹ ನಿರ್ಮಿಸಿಲ್ಲ, ಓದುವುದಕ್ಕೆ ಸರಿಯಾದ ಕೊಠಡಿಗಳು ಸಹ ಇಲ್ಲ. ಇದು ಕೇವಲ ಒಂದು ಶಾಲೆಯ ಸ್ಥಿತಿಗತಿ ಮಾತ್ರವಲ್ಲ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿಯೂ ಹೀಗೇ ಇದೆ. ರಾಜ್ಯದಲ್ಲಿ ಒಟ್ಟು 20,440 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 21,799 ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಈ ಪೈಕಿ 29,904 ಕಟ್ಟಡಗಳು ಶಿಥಿಲಗೊಂಡಿವೆ.

ಯಾವುದೇ ಮಗುವಿನ ಭವಿಷ್ಯವನ್ನು ಸರಿಯಾದ ಶಿಕ್ಷಣದಿಂದ ನಿರ್ಧರಿಸಲಾಗುತ್ತದೆ ಮತ್ತು ಸರಿಯಾದ ಶಿಕ್ಷಣವು ಶಾಲೆಯಿಂದಲೇ ಪ್ರಾರಂಭವಾಗಬೇಕಾಗುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಏನನ್ನಾದರೂ ಕಲಿಯುತ್ತಿರುತ್ತಾನೆ. ಯಾವ ಮನುಷ್ಯನೂ ಹುಟ್ಟಿನಿಂದ ಜ್ಞಾನವನ್ನು ಹೊಂದಿರುವುದಿಲ್ಲ, ಆದರೆ ಈ ಭೂಮಿಗೆ ಬಂದ ನಂತರವೇ, ಅವನು ಯಾವುದಾದರೂ ವಿಷಯದ ಬಗ್ಗೆ ಜ್ಞಾನವನ್ನು ಪಡೆಯುತ್ತಾನೆ. ಮಾನವ ಜೀವನವನ್ನು ಸುಸಂಸ್ಕೃತವಾಗಿಸುವಲ್ಲಿ ದೊಡ್ಡ ಕೊಡುಗೆ ಶಾಲೆಯಾಗಿದೆ. ಶಾಲೆ ಎಂದರೆ ಜ್ಞಾನ ನೆಲೆಸಿರುವ ಸ್ಥಳ. ವಿದ್ಯಾಭ್ಯಾಸ ಪಡೆಯಲು ನಾವು ಶಾಲೆಗೆ ಹೋಗಬೇಕು. ಏಕೆಂದರೆ ಶಾಲೆಯಲ್ಲಿ ನಾವು ಪ್ರತಿದಿನ ಹೊಸದನ್ನು ಕಲಿಯುವ ಸ್ಥಳವಾಗಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಹೇಳಲಾರದಸ್ತು ಸಮಸ್ಯಗಳು ಕಂಡುಬರುತ್ತವೆ.

ಕೆಲವು ಶಾಲೆಗಳಲ್ಲಿ ಸರಿಯಾದ ಸೌಚಾಲಯಗಳ ವ್ಯವಸ್ಥೆ ಇಲ್ಲ, ಮತ್ತೆ ಕುಡಿಯಲು ನೀರಿನ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಅದರ ಬಗ್ಗೆ ಜನಸಾಮಾನ್ಯರು ಏನಾದರೂ ಕೇಳಿದರೆ ಇದು ಸರ್ಕಾರಿ ಶಾಲೆ ಮಾ ಇಷ್ಟಿರೋದೇ ಹೆಚ್ಚು ಇನ್ನೇನು ಮಾಡಬೇಕು ನಿಮ್ಮ ಮಕ್ಕಳಿಗೆ ಅಂತ ಊರಿನ ಅಧ್ಯಕ್ಷರು ಹೇಳ್ತಾರೆ. ಮತ್ತೆ ಮಕ್ಕಳಿಗೆ ಒಂದೇ ವಿಷಯಗಳ ಬಗ್ಗೆ ಕಲಸಿಕೊಡುತ್ತಾರೆ. ಸ್ಕೂಲ್ ಬಿಟ್ಟು ಮಕ್ಕಳು ಮನೆಗೆ ಬಂದ ನಂತರ ನಾವೇನಾದ್ರೂ ನಿಮಗೆ ಹೋಂವರ್ಕ್ ಕೊಟ್ಟಿಲ್ಲ ನಿಮ್ಮ ಟೀಚರ್ ಅಂತ ಕೇಳಿದ್ರೆ ಇವತ್ತು ನಮ್ ಟೀಚರ್ ಶಾಲೆಗೆ ಬಂದಿಲ್ಲ ಅಂತ ಹೇಳುತ್ತಾರೆ.
ಶಾಲೆಯ ಟೀಚರ್ ಗಳು ಸರಿಯಾಗಿ ಶಾಲೆಗೆ ಬಂದು ಪಾಠ ಕಲಿಸದಿದ್ದರೆ ಇನ್ನು ಮಕ್ಕಳು ಏನು ಕಲಿಯುತ್ತಾರೆ? ಮೊದಲು ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಶಿಕ್ಷಕರನ್ನು ನೇಮಕ ಮಾಡಬೇಕು. ಒಂದೊಂದು ಊರಿನ ಶಾಲೆಯಲ್ಲಿ ಕಡಿಮೆ ಜನ ಶಿಕ್ಷಕರಿದ್ದು ಅವರು ಮಕ್ಕಳಿಗೆ ಏನು ಕಲಿಸುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ!?

ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಘೋಷಾವಾಕ್ಯಗಳು ಕೇಳಿಬರುತ್ತಿವೆ. ಆದರೆ ವಾಸ್ತವದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ನಾವು ಗಮನಿಸಿದರೆ ನಿಜಕ್ಕೂ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರಿ ಶಾಲೆಗಳಿಗೆ ಬರುವುದು ಬಹುತೇಕ ಬಡವರ ಮಕ್ಕಳು. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒತ್ತು ನೀಡಬೇಕಾಗಿದೆ.

SHANKAR G

Recent Posts

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

55 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago