ವಿಮರ್ಶೆಗಳು

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಅರಿವೇ ಗುರು’

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು” ಎಂಬಂತೆ ಎಲ್ಲಾ ಮಕ್ಕಳಿಗೂ ಹೆತ್ತ ತಂದೆ ತಾಯಿಯೇ ಮೊದಲ ಗುರುವಿನ ಸ್ಥಾನವನ್ನು ತುಂಬಿರುತ್ತಾರೆ. ನಂತರ ಮನೆಯಲ್ಲಿರುವ ಇತರ ಸದಸ್ಯರು, ಅಂದರೆ ಅಣ್ಣ, ಅಕ್ಕ, ಅಜ್ಜ, ಅಜ್ಜಿ ಹೀಗೆ ಅಕ್ಷರ ಕಲಿಸಿದ ಹಾಗೂ ಸರಿ ತಪ್ಪು ತಿಳಿಸಿ ನಮ್ಮನ್ನು ತಿದ್ದಿದ ಪ್ರತಿಯೊಬ್ಬರೂ ನಮ್ಮ ಗುರುವಿನ ಸ್ಥಾನದಲ್ಲೇ ನಿಲ್ಲುತ್ತಾರೆ.

ನಮ್ಮ ಬಾಳಿನಲ್ಲಿ ಅಜ್ಞಾನದ ಅಂಧಕಾರವನ್ನು ತೊಡೆದು, ಜ್ಞಾನದ ಬೆಳಕನ್ನು ನೀಡುವ ಪ್ರತಿಯೊಬ್ಬರೂ ಕೂಡ ನಮ್ಮ ಗುರುವೇ ಆಗಿರುತ್ತಾರೆ. ಹಾಗೆಯೇ ನಮ್ಮ ಬದುಕಿನಲ್ಲಿ ಸರಿ ತಪ್ಪನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವ ಪ್ರತಿಯೊಬ್ಬ ವ್ಯಕ್ತಿ ಕೂಡ ನಮ್ಮ ಗುರುವೇ ಆಗಿರುತ್ತಾರೆ.

ತನಗೆ ನೋವಾದಾಗ ಜೋರಾಗಿ ಅತ್ತು, ಮರುಕ್ಷಣವೇ ಅದನ್ನು ಮರೆತು ಕೇಕೆ ಹಾಕಿ, ನಕ್ಕು ಮುಖ ಅರಳಿಸುವ ಪುಟ್ಟ ಮಗು, ನಮಗೆ ಬದುಕಿನಲ್ಲಿ ನೋವುಗಳನ್ನು ಮರೆತು ನಗುತ್ತಾ ಮುಂದೆ ಸಾಗಬೇಕು ಎಂದು ತಿಳಿಸುವ ಗುರು. ಹಾಗೆಯೇ ಸಾಗುತ್ತಿರುವ ಹಾದಿಯಲ್ಲಿ ದ್ವಂದ್ವಗಳು ಎದುರಾಗಿ, ಎತ್ತ ಸಾಗುವುದೆಂದು ತಿಳಿಯದೇ ನಿಂತಾಗ ದಾರಿ ತೋರಿಸುವ ಸ್ನೇಹಿತರು, ಇಲ್ಲವೇ ಪರಿಚಿತರು ಕೂಡ ನಮ್ಮ ಗುರುವಿನಂತೆ.

ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವು ಕೂಡ ನಮಗೆ ಜೀವನದ ಮೌಲ್ಯವನ್ನು ಹೇಳಿಕೊಡುವ ಗುರು.ಪ್ರತಿ ದಿನ, ಪ್ರತಿ ಕ್ಷಣ, ನಾವು ಪ್ರಕೃತಿಯಿಂದ ಕಲಿಯುವ ವಿಚಾರ ಇದ್ದೇ ಇರುತ್ತದೆ. ಪ್ರಕೃತಿ ಹೇಗೆ ಯಾವುದೇ ಭೇಧಭಾವವಿಲ್ಲದೆ, ಯಾವುದೇ ಹಂಗಿಲ್ಲದೇ, ಮೋಹಕ್ಕೆ ಒಳಗಾಗದೆ ತನ್ನ ಪಾಡಿಗೆ ತಾನು ತನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿರುತ್ತದೆಯೋ, ಹಾಗೆಯೇ ನಾವು ಕೂಡ, ಪ್ರತಿಯೊಂದಕ್ಕೂ ಮನಸ್ಸನ್ನು ಕೆಡಿಸಿಕೊಳ್ಳದೇ, ಜೀವಿಸುವ ಕಲೆಯನ್ನು ಪ್ರಕೃತಿಯಿಂದ ಕಲಿಯಬೇಕು. ಪ್ರಕೃತಿಯಲ್ಲಿರುವ ಪ್ರತಿ ವಸ್ತುವಿನಲ್ಲೂ ನಮಗೆ ಬದುಕಿನ ಪಾಠ ಇರುತ್ತದೆ.

ಎಷ್ಟೇ ಅಡೆತಡೆಗಳು ಬಂದರೂ, ಅಣೆಕಟ್ಟನ್ನೇ ಕಟ್ಟಿದರೂ, ನೀರು ತನ್ನ ಹರಿಯುವ ಗುಣವನ್ನು ಹೇಗೆ ನಿಲ್ಲಿಸದೆಯೇ ಸಮುದ್ರವನ್ನು ಸೇರುವವರೆಗೂ ಹರಿಯುತ್ತಲೇ ಇರುತ್ತದೆಯೋ, ಹಾಗೆಯೇ ನಮ್ಮ ಬದುಕಿನಲ್ಲಿ ಕಷ್ಟನಷ್ಟಗಳ ಅಡೆತಡೆ ಬಂದರೂ, ನಾವು ನದಿಯಂತೆ ಸಾಗಿ ಗುರಿ ಎಂಬ ಸಮುದ್ರವನ್ನು ಸೇರಬೇಕು.
ಹೀಗೆ ಪ್ರತಿಯೊಂದರಲ್ಲೂ ನಾವು ಗುರುವನ್ನು ಕಾಣುವ, ಪಾಠವನ್ನು ಕಲಿಯುವ ಸಂಸ್ಕಾರವಿದ್ದಾಗ ಕಲಿಕೆಗೆ ಇತಿಮಿತಿ ಇರುವುದಿಲ್ಲ. ಹಾಗೆಯೇ ಎಲ್ಲದರೊಳಗೂ ಪಾಠವನ್ನು ಕಲಿಯುವ ಮನಸ್ಸು, ಗುರುವನ್ನು ಕಾಣುವ ಭಕ್ತಿ ನಮಗಿರಬೇಕು ಅಷ್ಟೇ.

ಗುರು ತೋರಿದ ದಾರಿಯಲ್ಲಿ ಸಾಗಿ ಅದರಲ್ಲಿ ಯಶಸ್ಸು ಸಿಕ್ಕಾಗ, ದಾರಿ ತೋರಿದ ಗುರುವನ್ನು ಮರೆಯದೇ ಇರುವವರೇ ನಿಜವಾದ ಶಿಷ್ಯರು. ಒಳ್ಳೆಯ ಕೆಲಸ, ಕೆಟ್ಟ ಕೆಲಸ, ಇತ್ಯಾದಿ ಎಲ್ಲಾ ಕೆಲಸಗಳಿಗೂ ಒಬ್ಬ ಗುರು ಇರುತ್ತಾನೆ. ಕಳ್ಳರಿಗೂ ಒಬ್ಬ ಗುರು ಇರುತ್ತಾನೆ, ಉತ್ತಮವಾದ ಗುರು, ಉತ್ತಮ ಹಾದಿಯನ್ನು ತೋರಿಸಿದರೆ, ಕೆಟ್ಟ ಗುರು ಕೆಟ್ಟ ದಾರಿಯನ್ನು ತೋರಿಸುತ್ತಾನೆ. ಪರಿಣಾಮ ಕೆಟ್ಟದಾಗಿಯೇ ಇರುತ್ತದೆ. ಹಾಗಾಗಿ ನಾವು ಸರಿಯಾದ ಗುರುವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಮಗೆ “ಅರಿವೇ ನಿಜವಾದ ಗುರು”. ಏಕೆಂದರೆ ಒಳ್ಳೆಯ ಹಾಗೂ ಕೆಟ್ಟದರ ಅರಿವು ನಮಗಿದ್ದರೆ ನಾವು ಒಳ್ಳೆಯ ಗುರುವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ಒಳ್ಳೆಯ ಹಾದಿಯಲ್ಲೇ ಸಾಗುತ್ತಾ, ಒಳ್ಳೆಯ ಗುರಿ ಮುಟ್ಟುತ್ತೇವೆ. ಅಂತಹ ಸಂಸ್ಕಾರ ನಮ್ಮ ಸುತ್ತ ಮುತ್ತಲ ಪರಿಸರದಿಂದ ಬರುತ್ತದೆ. ಹಾಗಾಗಿ ಗುರು ಎಂದರೆ ಅವರು ಕೇವಲ ನಾಲ್ಕು ಅಕ್ಷರಗಳನ್ನು ಹೇಳಿಕೊಡುವ ವ್ಯಕ್ತಿಯಾಗಿರದೇ, ಜೀವನದ ಮೌಲ್ಯ ಹಾಗೂ ಸರಿಯಾಗಿ ಬದುಕುವ ದಾರಿಯನ್ನು ಹೇಳಿಕೊಡುವ ಪ್ರತಿಯೊಬ್ಬರೂ ನಮಗೆ ಗುರುವಿನ ಸ್ಥಾನದಲ್ಲೇ ನಿಲ್ಲುತ್ತಾರೆ. ಅಂತಹಾ ಗುರುವಿಗೆ ಸದಾ ಭಕ್ತಿಯಿಂದಲಿ ನಮಿಸೋಣ.

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago