ಕವಿತೆಗಳು

ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

ಇಲ್ಲಿ ಏನೇ ಮಾಡಿದರೂ
ಜಯಿಸಬಹುದು..

ಇಲ್ಲಿ ನ್ಯಾಯ ಅನ್ಯಾಯಗಳ
ತೂಗುವ ತಕ್ಕಡಿ ಬೇಕಿಲ್ಲ..
ತೂಕದ ಬಟ್ಟುಗಳಲ್ಲಿ
ಅಂಕಿಗಳೇ ಇಲ್ಲ..

ತಕ್ಕಡಿ ಹಿಡಿದವನ ಕೈಲಿ ಹೆಬ್ಬೆರಳೇ ಇಲ್ಲ
ಭರತಮಾತೆ ಕ್ಷಮಯಾಧರಿತ್ರಿ.
ಕರೆಯದೆ ಬಂದ
ಭಂಡರಿಗೆಲ್ಲಾ ಜಾಗಕೊಟ್ಟು

ಬೆಳ್ಳಿ ಬಂಗಾರ ನವರತ್ನ,
ಸಂಪತ್ತು,ಉಡಿತುಂಬಿ ಕಳಿಸಿದವಳು.
ಉಂಡುಟ್ಟು ಹೊತ್ತುಹೋದವರ
ಬಗ್ಗೆಯೂ ಕರುಣಿತೋರಿದವಳು
ಹೊಡೆದ ದೇಗುಲಗಳ ಊನ ಶಿಲ್ಪಗಳ
ಮೌನವಾಗಿ ದಿಟ್ಟಿಸಿ ನಿಟ್ಟುಸಿರಾದವಳು
ಏಕೆಂದರೆ ಇವಳು ದಯಾಮಯಿ..

ಇಲ್ಲೀ ಏನು ಮಾಡಿದರೂ ಜಯಿಸಬಹುದು.
ಇಲ್ಲಿ ನೀನೂಮಂತ್ರಿಯಾಗಬಹುದು..
ಷಡ್ಯಂತ್ರಿ ಯಾಗಬಹುದು..

ಹೆಂಡ ಖಂಡಗಳ ದಾನಮಾಡಿ,
ಮಸ್ತಿ ಮೋಜಿನ ಪಾನಮಾಡಿ,
ಜೂಜು ಬಾಜಿನ ಅಡ್ಡ ತೋಡಿ,
ಓಟು ಕೊಂಡು ,ಘಾಟುಘಾಟು
ಮಾಂಸದೂಟ ಮಾಡಿ ಗೆಲ್ಲಬಹುದು,
ನೀನಿಲ್ಲಿ ಸಲ್ಲಬಹುದು ..
ಗದ್ದಿಗೆ ಏರಿ ಗುದ್ದಬಹುದು..
ಸಿಕ್ಕಿದನೆಲ್ಲ ಮೆದ್ದಬಹುದು..
ಖುರ್ಚಿ ಅಲುಗಾಡದಂತೆ ಗಟ್ಟಿಯಾಗಿರಲು
ದುಡ್ಡಿನ ತಳಪಾಯ ಸುಳ್ಳು ಗಾರೆಯ
ಲೇಪ ಹಚ್ಚಿದರೆ ಸಾಕು
ನೀನೂ ರಾಜ್ಯವಾಳಬಹುದು..
ಏಳ್ಗೆಗೆ ಶ್ರಮವೇಇಲ್ಲ..
ಓಟುಒತ್ತಿದವನ ನೆನಪು ಬೇಕಿಲ್ಲ..
ಇಲ್ಲಿ ಎಲ್ಲವನು ಜಯಿಸಬಹುದು!

SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago