ಸಂಜೆ ಪಯಣದ ದಾರಿಯಲ್ಲಿ
ಯಾರಿಲ್ಲದಿದ್ದರೂ ಜೊತೆಯಲ್ಲಿ
ನಿನಗೆ ನಾನು ನನಗೆ ನೀನು !
ಮುಂದಿನ ದಾರಿ ಗೊತ್ತಿಲ್ಲ
ಗುರಿಯೂ ತಿಳಿದಿಲ್ಲ
ಪಯಣದುದ್ದಕ್ಕೂ ಜೊತೆಯಿರುವೆ ನಾನು
ಇಷ್ಟು ಸಾಕಲ್ಲವೇನು ?
ಮೈಯಲ್ಲಿ ಕಸುವಿಲ್ಲ, ಕೈಯಲ್ಲಿ ಕಸುಬೂ ಇಲ್ಲ
ಒಡಹುಟ್ಟು ಜನ್ಮದಾತರೂ ಇಲ್ಲ !
ಕರುಳ ಕುಡಿಗಳು ಹಬ್ಬಿವೆ ಇನ್ನೆಲ್ಲೋ ?
ಅಗ್ನಿ ಸಾಕ್ಷಿಯ ಮುಂದೆ ಕೈ ಹಿಡಿದೆ ನೀನು
ನಿನ್ನನೆಂದಿಗೂ ಕೈ ಬಿಡೆನು ನಾನು !
ಈ ಜನ್ಮವಷ್ಟು ಪ್ರೀತಿಸೋಣ
ಮುಂದಿನ ಜನ್ಮ ಕಂಡವರಾರು ?
ವೈಭವ ಸಿರಿತನ ಅರಮನೆಯವರಿಗೆ
ಪ್ರೀತಿ ಹೃದಯ ನಮ್ಮಂಥವರಿಗೆ !
ಎಲ್ಲಿಂದಲೋ ಬಂದು ಜೊತೆಯಾದೆವು
ಜೊತೆಯಾಗಿಯೇ ನಡೆದೆವು
ಪ್ರೇಮ ದಾಖಲೆಗಳಲ್ಲಿ ಇಲ್ಲ ನಮ್ಮ ಹೆಸರು
ಜೊತೆಯಾಗಿಯೇ ಕೊನೆಯಾಗಲಿ ಉಸಿರು!
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…