ಏನೋ ತಕರಾರು ?
ಮುಂಗಾರು ತಡವಾಯಿತು,
ರೈತನಿಗೆ ಹದ ಹೊಲದ
ಹೊಕ್ಕುಳಾಳದಿ ಬೀಜ ಬಿತ್ತುವ ತವಕ,
ಭೂಮಿಗೆ ನೀರೆರದುಕೊಂಡು
ಮೊಳಕೆ ಹೊಡೆದು ಬಸಿರಾಗುವ ಬಯಕೆ,
ಯಾರದೋ ಬಯೆಕೆ
ಇನ್ನಾರದೋ ತವಕ
ನಮ್ಮ ಪ್ರೀತಿ ಸಹಿತ ಹಿತ.
ತಾಜಾ ತಂಪಿನ ಅಪ್ಪುಗೆ
ಬಿಸಿ ಬಿಸಿ ಕಾಯ್ದ ನೆಲಕೆ,
ಒಡಲಾಳದಿ ಅವಿತ ಬೀಜಕ್ಕೆ
ಉಗುರು ಬೆಚ್ಚಗಿನ ತಲೆ ಸ್ನಾನ,
ನನಗೆ ಪ್ರತಿ ಮುಂಗಾರಿನಲ್ಲೂ
ಅದೇ ಹಳೆಯ ಗೆಳತಿಯ
ನೆನಪುಗಳೇ ತಾಜಾ ತಾಜಾ.
ಮುಂಗಾರು ಮಳೆಗೆ ಮಡಿಲಲ್ಲಿ
ಬಚ್ಚಿಟ್ಟಿಕೊಂಡ ಪ್ರೀತಿ ಬೀಜ
ಮೊಳೆಕೆ ಹೊಡೆದು ಜಗಕೆ ಸಾರಿದೆ ,
‘ಇನ್ನೂ ಯಾರ ಹಂಗು ಭಯ ನನಗಿಲ್ಲವೆಂದು.,’
ಬಚ್ಚಿಟ್ಟಿದ್ದ ಪ್ರೀತಿ ಬಿಚ್ಚಿದ ಗಳಿಗೆ,
ತಣ್ಣನೆಯ ಮುಂಗಾರಿನಲ್ಲೂ
ಪ್ರೇಮಿಗಳಿಗಂತು ಬಿಸಿ ಬಿಸಿ ಹೋಳಿಗೆ.
ಬಣ್ಣವಿಲ್ಲದ ಕಡು ಕಪ್ಪು ಬಣ್ಣದ ಮುಂಗಾರು
ಸಣ್ಣಗೆ ಹನಿಯುವ ತುಂತುರು ನಿಸರ್ಗ ಕಾರಂಜಿ,
ಪುಟ್ಟ ಪುಟ್ಟ ಮನಸ್ಸು ಅರಳಿಸಿದ ಪರಿಗೆ
ಪ್ರೇಮಿಗಳ ಮನಗಳ ತಾಕಲಾಟದಿಂದ
ಜೀವನವೆಲ್ಲಾ ರಂಗು ರಂಗು.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಮನಸ್ಸಿಗೆ ಮುದ ಕೊಟ್ಟ ಕವನ
ಮುಂಗಾರು ಕವನ ಓದಿದಾಗ
ಮುಂಗಾರಿನ ಮಳೆಯಷ್ಟೇ .... ಹಿತಕೊಡುತ್ತಿದೆ.