ಮತ್ತೆ ಮತ್ತೆ ಮೌನ
ಮುರಿದು ಕೆಣಕದಿರು
ನಿನಗಿದು ಕೊನೆಯೆಚ್ಚರಿಕೆ!
ದುಡಿದು ಬಾಳಲಿ ಮೌನದಿ
ಬದುಕು ಬಂಗಾರವಾಗಲಿ
ಎಂದರೂ ಬಡಿದು ತಿನ್ನುವ
ನಿಮ್ಮ ಹರಕೆ ನಿಮ್ಮ ತಲೆಗೆ
ತಲೆಯಲಿಟ್ಟು ಸುಡುವ ಬಯಕೆ
ಅದೊಂದು ದಿನ ಕದಡಿ
ಮೌನ ಕನಲಿ ಕೇಳಿತು
ಕೂಗಿ ಕೂಗಿ ಹೇಳಿತು
ನೆಲದ ಹಾಲು ಬೇಡಿತು
ರಣಭೈರವ ಹಕ್ಕಿಗಳು
ರೆಕ್ಕೆ ಬೀಸಿ ಹಾರಿದವು
ಬಾನ ಮೌನ ಸೀಳಿ ಬರಲು
ನೆಲದ ತಾಯ ತೊಡೆಯ
ಮೇಲೆ ಮಲಗಿದ ಲಕ್ಷ
ಲಕ್ಷ ಜನರು ಮೇಲೇಳಲಿಲ್ಲ
ಮುಗಿಲೇರಿ ಸಾವು ನಕ್ಕು
ಸುತ್ತಿ ಸುಳಿದು ಕೀಳುತ್ತಿತ್ತು
ಜೀವಸಸಿಗಳ
ಜನರೇ ಇಲ್ಲಿ ನಿರ್ಜನ
ಹೊಗೆಯ ಮೂಡ ತುಂಬಿ ಬಂತು
ಯಮನ ಪಾಸ ಮಿಂಚುತ್ತಿತ್ತು
ಲಕ್ಷ ಜೀವ ಸುಟ್ಟ ಪಾಪ
ಕೂಗುತ್ತಿತ್ತು ನೆಲದ ಶಾಪ
ವಿಜ್ಞಾನದ ಭಸ್ಮಾಸುರ
ತನ್ನ ಹಸ್ತ ಚಾಚಿತು
ನೆಲದ ಹರಕೆ ತೀರಿತು
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…