ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ
ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ
ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ
ಇಲ್ಲಿ ಇವರು ಹೆಸರು ಬದಲಿಸಲು ನಿಂತಿದ್ದಾರೆ
ಅಲ್ಲಿ ಅವರು ಮಾನಕ್ಕಾಗಿ ಅಳುತ್ತಿರುವಾಗ
ಇಲ್ಲಿ ಇವರು ಭಕ್ತಿಗಾಗಿ ಬಡಿದಾಡುತ್ತಿದ್ದಾರೆ
ಅಲ್ಲಿ ಅವರು ದಾಹಕ್ಕಾಗಿ ಹಾತೊರೆಯುವಾಗ
ಇಲ್ಲಿ ಇವರು ಲೀಟರಿನ ಲೆಕ್ಕಾಚಾರದಲ್ಲಿದ್ದಾರೆ
ಅಲ್ಲಿ ಅವರು ಉಸಿರಿಗಾಗಿ ಪರದಾಡುವಾಗ
ಇಲ್ಲಿ ಇವರು ಗಾಳಿಯ ಜೊತೆ ವ್ಯವಹರಿಸುತ್ತಿದ್ದಾರೆ
ಅಲ್ಲಿ ಅವರು ಹಾಲಿಗಾಗಿ ಹಂಬಲಿಸುವಾಗ
ಇಲ್ಲಿ ಇವರು ನೈವೇದ್ಯಯ ಚಿಂತೆಯಲ್ಲಿದ್ದಾರೆ
ಅಲ್ಲಿ ಅವರು ಆಕಾಶ ನೋಡುತ್ತಿರುವಾಗ
ಇಲ್ಲಿ ಇವರು ತಿಂದು ತೇಗುತ್ತಿದ್ದಾರೆ
ಅಲ್ಲಿ ಅವರು ಕೂಲಿ ಕೇಳುತ್ತಿರುವಾಗ
ಇಲ್ಲಿ ಇವರು ಮನುಷ್ಯರಾಗಿರುವುದನ್ನೇ ಮರೆತಿದ್ದಾರೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಇಂದಿನ ಪೀಳಿಗೆಯ ವ್ಯಕ್ತಿತ್ವ ಮನಸ್ಥಿತಿಯನ್ನ ಕವನದ ಮೂಲಕ ಬಹಳ ಸೊಗಸಾಗಿ ಬರೆದಿದ್ದೀರಿ.