ಕವಿತೆಗಳು

ಉದಂತ ಶಿವಕುಮಾರ್ ಅವರು ಬರೆದ ಕವಿತೆ ‘ಕತ್ತಲೆಯ ಹಾಡು ಕೇಳುವರಾರು?’

ಅಲ್ಲಿ ಅವರು ಸೂರಿಗಾಗಿ ಮೊರೆಯಿಡುವಾಗ
ಇಲ್ಲಿ ಇವರು ಮಂದಿರಕ್ಕಾಗಿ ಮಾರ್ಧನಿಸುತ್ತಿದ್ದಾರೆ
ಅಲ್ಲಿ ಅವರು ಹಸಿವಿಗಾಗಿ ಅಳುತ್ತಿರುವಾಗ
ಇಲ್ಲಿ ಇವರು ಹೆಸರು ಬದಲಿಸಲು ನಿಂತಿದ್ದಾರೆ

ಅಲ್ಲಿ ಅವರು ಮಾನಕ್ಕಾಗಿ ಅಳುತ್ತಿರುವಾಗ
ಇಲ್ಲಿ ಇವರು ಭಕ್ತಿಗಾಗಿ ಬಡಿದಾಡುತ್ತಿದ್ದಾರೆ
ಅಲ್ಲಿ ಅವರು ದಾಹಕ್ಕಾಗಿ ಹಾತೊರೆಯುವಾಗ
ಇಲ್ಲಿ ಇವರು ಲೀಟರಿನ ಲೆಕ್ಕಾಚಾರದಲ್ಲಿದ್ದಾರೆ

ಅಲ್ಲಿ ಅವರು ಉಸಿರಿಗಾಗಿ ಪರದಾಡುವಾಗ
ಇಲ್ಲಿ ಇವರು ಗಾಳಿಯ ಜೊತೆ ವ್ಯವಹರಿಸುತ್ತಿದ್ದಾರೆ
ಅಲ್ಲಿ ಅವರು ಹಾಲಿಗಾಗಿ ಹಂಬಲಿಸುವಾಗ
ಇಲ್ಲಿ ಇವರು ನೈವೇದ್ಯಯ ಚಿಂತೆಯಲ್ಲಿದ್ದಾರೆ

ಅಲ್ಲಿ ಅವರು ಆಕಾಶ ನೋಡುತ್ತಿರುವಾಗ
ಇಲ್ಲಿ ಇವರು ತಿಂದು ತೇಗುತ್ತಿದ್ದಾರೆ
ಅಲ್ಲಿ ಅವರು ಕೂಲಿ ಕೇಳುತ್ತಿರುವಾಗ
ಇಲ್ಲಿ ಇವರು ಮನುಷ್ಯರಾಗಿರುವುದನ್ನೇ ಮರೆತಿದ್ದಾರೆ

SHANKAR G

View Comments

  • ಇಂದಿನ ಪೀಳಿಗೆಯ ವ್ಯಕ್ತಿತ್ವ ಮನಸ್ಥಿತಿಯನ್ನ ಕವನದ ಮೂಲಕ ಬಹಳ ಸೊಗಸಾಗಿ ಬರೆದಿದ್ದೀರಿ.

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago