ಉಸಿರು ಗಟ್ಟುವ ವಾತಾವರಣದಲ್ಲಿ
ಗಂಟಲು ಬಿಗಿ ಹಿಡಿದುಕೊಂಡು
ಉಗುಳು ನುಂಗುತ್ತಿದ್ದೇನೆ
ಬಂಧನವನ್ನು ದಾಟಿ ಬರಲು
ಮನದ ಕನಸುಗಳ ಜೊತೆ
ಆಗೊಮ್ಮೆ ಈಗೊಮ್ಮೆ ಹೊಗಳುವರು
ಸೃಷ್ಟಿಗೆ ಕಾರಣ, ನೀನಿಲ್ಲದೆ ಏನಿಲ್ಲವೆಂದು
ಮತ್ತ ಅದೇ ರಾಗ, ನಿರ್ಬಂಧ
ಮಾತಿಗೆ ಸೀಮಿತ ಮಾಡಿ, ಮೂಲೆಗೆ
ನೂಕು ಬಿಟ್ಟರು ಆಸೆಗಳು ಕೊಂದು
ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಅಸ್ತಿತ್ವಕ್ಕಾಗಿ
ಹಗಲಿರುಳು ದುಡಿಯುತ್ತಿದ್ದಾರೆ, ಆದರೆ! ಅವರು,,,
ಸದಾ ಸಮಾಜದ ಎದುರು ಸಾಮರ್ಥ್ಯದ
ರುಜು ಮಾಡಬೇಕು, ತಾನು ಸಮರ್ಥಳೆಂದು
ಹೃದಯ ಹಿನ ಸಮಾಜದೆದುರು
ಗರ್ಭದಿಂದ ಹುಟ್ಟಿರುವರು ಎಲ್ಲರೂ
ಗರ್ಭಗುಡಿಗೆ ನಿಷೇಧ ಹೇರಿದ್ದಾರೆ
ನೆಲ-ಜಲ ಎಲ್ಲವೂ ನೀನೇ ಎಂದು
ಧರ್ಮಗಳ ಬೇಲಿಯಲ್ಲಿ ಬಂಧಿಸಿ
ಸಮಾನತೆಗೆ ಬೆಂಕಿ ಹಚ್ಚಿದ್ದಾರೆ.
ಯಾರು ನಾನು, ಹೌದು! ಯಾರು? ನೆಲೆಯಲ್ಲಿ.
ಕಾಲಿಗೆ ಚಕ್ರ ಕಟ್ಟಿದವರಂತೆ ತಿರುಗುತ್ತಿದೇನೆ
ತಂದೆ,ಗಂಡ,ಮಗನ ಅಡಿಯಲ್ಲಿ
ತನ್ನ, ತನವನ್ನು ಮರೆತು ಬದಕುತಿದೇನೆ
ಎಲ್ಲವೂ ಗೊತ್ತಿದ್ದದರು, ಗಂಟಲಲ್ಲಿ ಧ್ವನಿ ಬಿಗಿ ಹಿಡಿದು
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ತುಂಬ ಉತ್ತಮವಾದ ಮತ್ತು ಮಾರ್ಮಿಕವಾದ ಹಾಗೂ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವ ಪ್ರಯತ್ನ