ಕವಿತೆಗಳು

ಸರಸ್ವತಿ ವಿ.ಎಸ್. ಅಯೋನಿಜೆ ಅವರು ಬರೆದ ಕವಿತೆ ‘ಕಾಡಿದ ಕಂಗಳು’

ತನ್ನವಳ ನಯನ ಕವಿತಾ ದುಂದುಬಿಗೆ,
ಮುಖಾರವಿಂದದೆ ಕಮಲದೆಸಳಂಥಾ
ಅಕ್ಷಿಗಳೆಂಬ ಬಿಂಬ ಬಾವಿಯಲಿ,
ಸನ್ಮೋಹನದಿಳಿದ ಅವಳ ಸೌಂದರ್ಯಕೆ
ಶರಣಾದ ದಾಸ ಪದಪುಂಜಾಸ್ತ್ರದೆ,
ಪ್ರಕೃತಿಯ ಮೇಲೆ ಸಮರ ಸಾರಿದ್ದ
ತನ್ನವಳ ನಯನದ ಅಂದ ಪುರಾಣಕೆ…

ಜೋಡಿ ಹುಬ್ಬುಗಳ ಹೋಲಿಕೆ ದಾರಿಗೆ
ಕಾಮನಬಿಲ್ಲ ಕರಗಿಸಿ ಎರಕ ಹೊಯ್ದಾ,
ಬಣ್ಣ ತ್ಯಜಿಸಿದ ಬಿಲ್ಲು ಕಪ್ಪಾಯ್ತು
ಆ ಹುಬ್ಬಿಗೆ ಮುಚ್ಚಿತೆರೆವ ರೆಪ್ಪೆಗಳು ಭ್ರಮರದಂತೆ,
ಭ್ರಮೆತರಿಸುತಿರೆ ಆ ಭ್ರಮೆಯಲಿ
ಭ್ರಮರನಾದ ಪುರುಷ ಭ್ರಮರ
ತಾ ಸೋಲುತಾ ಸೋತು ಶರಣಾಗುತಾ…

ಇಣುಕಿನೋಡಿದ್ದು ಕಣ್ಣಾಳದಲಿ
ಪವನಾಸ್ತ್ರದ ಶರ ಹೊರಟಿದ್ದು ಅವನೆದೆಗೆ,
ರುದಿರದೆ ಬೆರೆತ ಮಂದ ಮಾರುತದ
ಹೊನಲ ಆಗರದಂತೆ ಮೇಘ ಮಂದಾಕಿನಿ
ಮೆಲ್ಲನೆ ಕೂತಳು ತಪಸ್ಸಿಗೆ ಕುಡಿ ನೋಟದ
ಬಾಣದೆ ಹಸನಾದ ಅವನ
ಹೃದಯವೆಂಬ ಹಿಮಪರ್ವತದಲಿ…

ಅದೆಷ್ಟು ಸೂಜಿಗಲ್ಲ ಸೇರಿಸಿ ಮಾಡಿದ,
ಚಂದಿರ ತಾವರೆ ಮೀನುಗಳೆಲ್ಲಾ
ಇವಳ ಕಣ್ಣ ನೋಡಿ ತಾವೇ ಸೋತು ನಾಚಿ,
ಮತ್ಸ್ಯನು ಸಾಗರನ ಸೇರುತಿರೆ ಸಾಗರನ
ಭೋರ್ಗರೆತ ಚಂದ್ರನೆಡೆಗೆ ತಲುಪಿದೆ,
ಕಮಲವಂತೂ ಸೋತು ತಲೆಬಾಗಿರಲು,
ಸಾಗರನು ಸಂತೈಸುತಿರುವ ಸಂಜೆಯಲಿ…

ಅವಳು ನಿನ್ನ ತಂಗಿ ಬಿಡೆಂದು ಸಾಂತ್ವಾನಿಸುತಾ,
ಚಂದ್ರನಂತೂ ನಿನ್ನ ಕಂಡರೆಲ್ಲಿ ಸೋಲುವೆನೆಂಬ
ಕಾರಣಕೆ ಹಠವಾದಿಯಂತೆ ಅಚಲದಿ ನಿಂತರೂ
ಹಾಗೊಮ್ಮೆ ಹೀಗೊಮ್ಮೆ ಆಕಾಶದಿಂದ ಭುವಿ ಎಡೆಗೆಗೊಮ್ಮೆ ನೋಡೆ,
ಆ ನಯನ ಸೌಂದರ್ಯವ ಕಂಡು
ನೊಂದು ಕೊರಗುತಾ ಕ್ಷೀಣನಾಗುತಿರುವ.

ತಾರಾಮಂಡಲದ ಪಟ್ಟದರಸಿಯರೆಲ್ಲಾ
ಚಂದ್ರನ ಕ್ಷೇಮಕುರಿತು ಯೋಚಿಸಿ
ಶಿವನ ಮುಡಿಗೆ ಬಿಟ್ಟುಕೊಟ್ಟು
ನಿನ್ನ ಕಂಡು ಹುಸಿ ಕೋಪ ತೋರುತಿರಲು,
ಚೆಂದದಿ ನಕ್ಕು ತನಗೇನೂ ಅರಿಯದಂತೆ
ಬೆಳ್ಳಿ ಕಾಲ್ಗೆಜ್ಜೆಯಲಿ ಕಲರವ ಮಾಡುತಾ
ಮನದ ಬರಡು ನೆಲದಿ ಪ್ರೇಮಗಂಗೆಯಾದವಳೆ.

SHANKAR G

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago