ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ
ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ
ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ
ದೂರದಿಂದ ಕಾಣುವುದು ನುಣ್ಣಗಷ್ಟೇ
ನಡೆವ ಹಾದಿಯಲ್ಲಿ ಹುಲ್ಲು ಮುಳ್ಳು ಗಳಿರಬಹುದು
ಗಮನವೆಲ್ಲ ಗುರಿಯ ಮೇಲಷ್ಟೇ
ಬಿರುಗಾಳಿ ಅಥವಾ ತಂಗಾಳಿ ಬೀಸುತಿರಬಹುದು
ಹೆಜ್ಜೆಯ ಮುಂದೆ ಇಡುತಿರಬೇಕಷ್ಟೆ
ಮಧ್ಯಾಹ್ನದ ಬಿಸಿಲು ಇಲ್ಲ ಸಂಜೆಯ ತಂಪಿರಬಹುದು
ಹಾದಿಯ ತಿರುವುಗಳು ತಿಳಿದಿರಬೇಕಷ್ಟೆ
ಮಳೆಗಾಲವಿರಬಹುದು ಸುಡು ಬೇಸಿಗೆ ಬರಬಹುದು
ಕ್ರಮಿಸಿದ ಕಾಲದ ಬಗ್ಗೆ ನೆನಪಿರಬೇಕಷ್ಟೆ
ಬಿದ್ದಾಗ ತಳ್ಳುವರಿರಬಹುದು, ಕೈ ನೀಡಿ ಎತ್ತುವವರಿರಬಹುದು
ಮುಂದಿಡುವ ಹೆಜ್ಜೆಗಳ ನಿಲ್ಲಿಸಬಾರದಷ್ಟೇ
ಮುಂದೆ ಚಪ್ಪಾಳೆ ಕೇಳಬಹುದು, ಹಿಂದೆ ಕೈ ತೋರಿಸಿ ನಗುವವರಿರಬಹುದು
ಮನಸ್ಸು ಸ್ಥಿಮಿತವಾಗಿರಬೇಕಷ್ಟೆ
ಪರ್ವತದ ತುದಿಯನೇರಿ ನೀ ನಡೆದ ಹಾದಿಯ ಕಾಣಬಹುದು
ಕೊನೆಗೆ ಕಾಣುವುದು ನೀ ನಡೆದ ಹೆಜ್ಜೆಗಳಷ್ಟೇ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…