ಕವಿತೆಗಳು

ಷಣ್ಮುಖಾರಾಧ್ಯ ಕೆ ಪಿ ಅವರು ಬರೆದ ಕವಿತೆ ‘ಸ್ಥಿತ ಪ್ರಜ್ಞ’

ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ
ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ
ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ
ದೂರದಿಂದ ಕಾಣುವುದು ನುಣ್ಣಗಷ್ಟೇ

ನಡೆವ ಹಾದಿಯಲ್ಲಿ ಹುಲ್ಲು ಮುಳ್ಳು ಗಳಿರಬಹುದು
ಗಮನವೆಲ್ಲ ಗುರಿಯ ಮೇಲಷ್ಟೇ
ಬಿರುಗಾಳಿ ಅಥವಾ ತಂಗಾಳಿ ಬೀಸುತಿರಬಹುದು
ಹೆಜ್ಜೆಯ ಮುಂದೆ ಇಡುತಿರಬೇಕಷ್ಟೆ

ಮಧ್ಯಾಹ್ನದ ಬಿಸಿಲು ಇಲ್ಲ ಸಂಜೆಯ ತಂಪಿರಬಹುದು
ಹಾದಿಯ ತಿರುವುಗಳು ತಿಳಿದಿರಬೇಕಷ್ಟೆ
ಮಳೆಗಾಲವಿರಬಹುದು ಸುಡು ಬೇಸಿಗೆ ಬರಬಹುದು
ಕ್ರಮಿಸಿದ ಕಾಲದ ಬಗ್ಗೆ ನೆನಪಿರಬೇಕಷ್ಟೆ

ಬಿದ್ದಾಗ ತಳ್ಳುವರಿರಬಹುದು, ಕೈ ನೀಡಿ ಎತ್ತುವವರಿರಬಹುದು
ಮುಂದಿಡುವ ಹೆಜ್ಜೆಗಳ ನಿಲ್ಲಿಸಬಾರದಷ್ಟೇ
ಮುಂದೆ ಚಪ್ಪಾಳೆ ಕೇಳಬಹುದು, ಹಿಂದೆ ಕೈ ತೋರಿಸಿ ನಗುವವರಿರಬಹುದು
ಮನಸ್ಸು ಸ್ಥಿಮಿತವಾಗಿರಬೇಕಷ್ಟೆ

ಪರ್ವತದ ತುದಿಯನೇರಿ ನೀ ನಡೆದ ಹಾದಿಯ ಕಾಣಬಹುದು
ಕೊನೆಗೆ ಕಾಣುವುದು ನೀ ನಡೆದ ಹೆಜ್ಜೆಗಳಷ್ಟೇ…

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago