ಕವಿತೆಗಳು

ಷಣ್ಮುಖಾರಾಧ್ಯ ಕೆ ಪಿ ಅವರು ಬರೆದ ಕವಿತೆ ‘ಸ್ಥಿತ ಪ್ರಜ್ಞ’

ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ
ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ
ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ
ದೂರದಿಂದ ಕಾಣುವುದು ನುಣ್ಣಗಷ್ಟೇ

ನಡೆವ ಹಾದಿಯಲ್ಲಿ ಹುಲ್ಲು ಮುಳ್ಳು ಗಳಿರಬಹುದು
ಗಮನವೆಲ್ಲ ಗುರಿಯ ಮೇಲಷ್ಟೇ
ಬಿರುಗಾಳಿ ಅಥವಾ ತಂಗಾಳಿ ಬೀಸುತಿರಬಹುದು
ಹೆಜ್ಜೆಯ ಮುಂದೆ ಇಡುತಿರಬೇಕಷ್ಟೆ

ಮಧ್ಯಾಹ್ನದ ಬಿಸಿಲು ಇಲ್ಲ ಸಂಜೆಯ ತಂಪಿರಬಹುದು
ಹಾದಿಯ ತಿರುವುಗಳು ತಿಳಿದಿರಬೇಕಷ್ಟೆ
ಮಳೆಗಾಲವಿರಬಹುದು ಸುಡು ಬೇಸಿಗೆ ಬರಬಹುದು
ಕ್ರಮಿಸಿದ ಕಾಲದ ಬಗ್ಗೆ ನೆನಪಿರಬೇಕಷ್ಟೆ

ಬಿದ್ದಾಗ ತಳ್ಳುವರಿರಬಹುದು, ಕೈ ನೀಡಿ ಎತ್ತುವವರಿರಬಹುದು
ಮುಂದಿಡುವ ಹೆಜ್ಜೆಗಳ ನಿಲ್ಲಿಸಬಾರದಷ್ಟೇ
ಮುಂದೆ ಚಪ್ಪಾಳೆ ಕೇಳಬಹುದು, ಹಿಂದೆ ಕೈ ತೋರಿಸಿ ನಗುವವರಿರಬಹುದು
ಮನಸ್ಸು ಸ್ಥಿಮಿತವಾಗಿರಬೇಕಷ್ಟೆ

ಪರ್ವತದ ತುದಿಯನೇರಿ ನೀ ನಡೆದ ಹಾದಿಯ ಕಾಣಬಹುದು
ಕೊನೆಗೆ ಕಾಣುವುದು ನೀ ನಡೆದ ಹೆಜ್ಜೆಗಳಷ್ಟೇ…

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago