ಕವಿತೆಗಳು

ಶಾರದಾ ಶ್ರಾವಣಸಿಂಗ ರಜಪೂತ ಅವರು ಬರೆದ ಕವಿತೆ ‘ಮೌನದಿಂದ ಶಬ್ದದೆಡೆಗೆ..’

ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ
ತನ್ನೋಡಲಾಳದ ಭಾವ ಹೆಕ್ಕಿ ತೆಗೆದು
ಕಾಲಗರ್ಭದ ಕತ್ತಲೆಯಲಿ ಹೂತೋದ
ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ!
ತೊಡಿಸಿದವರು ತೊಟ್ಟರು’ಸುವರ್ಣ ಮೊಗ’
ಫಳಫಳನೆ ಹೊಳೆದು ಜಗಕೆನಿಸಿದರಿವರು ದೊಡ್ಡವರು!
ಧರಣಿಯಲ್ಲುಂಟು’ಚಲನೆ’ ಇದು ಪ್ರಜ್ಞಾದೃಷ್ಟಿ
ಕಂಡವರ ಕರುಳಿಗೆ ಕೈಹಾಕುವರೆಲ್ಲ ಅಸುರಸೃಷ್ಟಿ!
‌ಅಸ್ತಿತ್ವಕೆ ಬೆಲೆ ಕೊಟ್ಟು, ಪಡೆದಾಗ
ನಿನಗುಂಟು ಕಾಣದ ನೆಲೆಯಲ್ಲಿ ಸ್ಥಾನ!

ಉತ್ತರಿಸಲಾಗದೇ ಉಳಿದ ಮೌನವೂ ಉತ್ತರವೇ
ದೃಷ್ಟಿ ಕೊಟ್ಟ ಕಣ್ಣಿಗೆ ದೃಷ್ಟಿಕೋನ ನೀಡಿ ನೋಡು
ಸ್ಥಿರ ಮನಸ್ಸಿನಲ್ಲಿ ವಾಸ್ತವದ ಪ್ರತಿಬಿಂಬವಿದೆ!
ರೆಕ್ಕೆಗಳು ಸೋತರೂ ಹಾರುವುದ ನಿಲ್ಲಿಸದ ಹಕ್ಕಿಗೆ
ಗುರುತಿನ ಕೊರತೆಗಳಿವೆ,ಭಾಗ್ಯಗಳಿಲ್ಲದ ಹೊತ್ತಿನಲಿ..
ತಲ್ಲಣಗಳ ಮಧ್ಯೆ ಕಟ್ಟಿಕೊಂಡಷ್ಟೆ ಬದುಕೆಂಬ
ನಂಬಿಕೆ ಅಳಿಸಲು ಮುಂದಾಗುವ ಮುನ್ನ
ಸವಾಲಿನ ಪಥದಲಿ ಹೆಜ್ಜೆ ಇಟ್ಟ”ಮೌನ”
ನಂಬಿಕೆಯ ಬೆನ್ನಟ್ಟಿ,ಸವಾಲುಗಳ ಬಡಿದಟ್ಟಿ
ಬೌದ್ದಿಕ ಸಮಚಿತ್ತತೆಯ ಮಾತಿಗೆ ಸಮಾಧಿ ಕಟ್ಟಿ
ಮಾತಿಗೆ ಮತ್ತೇ ಘನತೆ ತರುವೆಡೆ
ಗೋರಿಯ ಮೇಲೆ ಹೆಜ್ಜೆಯಿಟ್ಟು ನಡೆದಿದೆ
‘ಸೀತೆ’ಮೌನವನ್ನೇ ಪ್ರತಿಭಟನೆಯ ಅಸ್ತ್ರವನ್ನಾಗಿಸಿದಂತೆ..
“ಮೌನಂ ಸಮ್ಮತಿ ಲಕ್ಷಣಂ”ಸೀಮಾರ್ಥದಲ್ಲಿರಬೇಡ
ಮೌನದಲ್ಲುಂಟು ನೀನರ್ಥೈಸಿಕೊಳ್ಳಲಾಗದೆತ್ತರ
ಪದಗಳ ಆಳದಲಿ ‘ಕಾವ್ಯ ಶಬ್ದಗಳು’ಇಳಿದಿಟ್ಟ ಹೆಜ್ಜೆ
ಹೊರಟಿವೆ ಮನಸುಗಳ ಕಳೆ ಕೀಳಲು
ಚಡಪಡಿಸಿ ಕಿಡಿ ಹೊತ್ತ ಶಬ್ದಗಳ ಗುಚ್ಛ ಹಿಡಿದು!

SHANKAR G

View Comments

Share
Published by
SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago