ಅವಳೆಂದರೆ ಭಾವನೆಗಳ ತೇರು
ಪದಗಳಂದವ ಮುಡಿಸೊ ಸೊಗಸು
ತಿಳಿವೆನೆಂದರೆ ಸಾಗರದಾಳದ ಮುತ್ತು
ಒಲವಿನಂಗಳದ ಮೊಗ್ಗಿನ ಮನಸ್ಸು
ಬೆರೆಯುವಳು ಮನದಾಳದಿ ಕುಳಿತು
ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು
ಶಬುದದೊಳಗೊಮ್ಮೆ ಹೀಗೆಯೇ ಅವಿತು
ಕಾಡಿಸುವ ಬಾಲೆ ಬರೆಸುತ್ತಾಳಿವಳು
ಅಂಬೆಗಾಲನ್ನಿಡುವ ಹಸುಳೆ ಇನ್ನೂ ಮುಗ್ಧೆ!..
ತೊದಲುವುದನ್ನಿವಳಿನ್ನೂ ಬಿಟ್ಟೇ ಇಲ್ಲ
ವರುಷಗಳುರುಳಿದಂತೆ ಹರುಷ ಪಡಬಹುದೇನೋ!?
ಮುದ್ದಿನ ಮಾತೆರಡು ನುಡಿಯಬಹುದೇನೋ?…
ಭವಿತವ್ಯದಲ್ಲಿ ಗಟ್ಟಿ ಹೆಜ್ಜೆ ಊರಿಯಾಳು,
ಅಚ್ಚಳಿಯದಂತೆ ಮನದಿ ನೆಲೆಗೊಂಡಾಳು
ಕಾಯುತ್ತೆನಲ್ಲಿಯವರೆಗೂ ಬೇಸರವಿಲ್ಲ ಮಗಳೆ
ಎಷ್ಟಾದರೂ ನೀ,ನಾ ಹೆತ್ತ ಪ್ರೀತಿಯ ಕವಿತೆಯಲ್ಲವೆ!
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಚೆನ್ನಾಗಿದೆ ಕವಿತೆ 👍
Super ji