ಕವಿತೆಗಳು

ಸರೋಜಾ ಶ್ರೀಕಾಂತ್ ಅಮಾತಿ ಕಲ್ಯಾಣ್ ಮುಂಬೈ ಅವರು ಬರೆದ ಕವಿತೆ ‘ಅವಳೆಂದರೆ!’

ಅವಳೆಂದರೆ ಭಾವನೆಗಳ ತೇರು
ಪದಗಳಂದವ ಮುಡಿಸೊ ಸೊಗಸು
ತಿಳಿವೆನೆಂದರೆ ಸಾಗರದಾಳದ ಮುತ್ತು
ಒಲವಿನಂಗಳದ ಮೊಗ್ಗಿನ ಮನಸ್ಸು

ಬೆರೆಯುವಳು ಮನದಾಳದಿ ಕುಳಿತು
ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು
ಶಬುದದೊಳಗೊಮ್ಮೆ ಹೀಗೆಯೇ ಅವಿತು
ಕಾಡಿಸುವ ಬಾಲೆ ಬರೆಸುತ್ತಾಳಿವಳು

ಅಂಬೆಗಾಲನ್ನಿಡುವ ಹಸುಳೆ ಇನ್ನೂ ಮುಗ್ಧೆ!..
ತೊದಲುವುದನ್ನಿವಳಿನ್ನೂ ಬಿಟ್ಟೇ ಇಲ್ಲ
ವರುಷಗಳುರುಳಿದಂತೆ ಹರುಷ ಪಡಬಹುದೇನೋ!?
ಮುದ್ದಿನ ಮಾತೆರಡು ನುಡಿಯಬಹುದೇನೋ?…

ಭವಿತವ್ಯದಲ್ಲಿ ಗಟ್ಟಿ ಹೆಜ್ಜೆ ಊರಿಯಾಳು,
ಅಚ್ಚಳಿಯದಂತೆ ಮನದಿ ನೆಲೆಗೊಂಡಾಳು
ಕಾಯುತ್ತೆನಲ್ಲಿಯವರೆಗೂ ಬೇಸರವಿಲ್ಲ ಮಗಳೆ
ಎಷ್ಟಾದರೂ ನೀ,ನಾ ಹೆತ್ತ ಪ್ರೀತಿಯ ಕವಿತೆಯಲ್ಲವೆ!

SHANKAR G

View Comments

Share
Published by
SHANKAR G

Recent Posts

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago