ಅವಳೆಂದರೆ ಭಾವನೆಗಳ ತೇರು
ಪದಗಳಂದವ ಮುಡಿಸೊ ಸೊಗಸು
ತಿಳಿವೆನೆಂದರೆ ಸಾಗರದಾಳದ ಮುತ್ತು
ಒಲವಿನಂಗಳದ ಮೊಗ್ಗಿನ ಮನಸ್ಸು
ಬೆರೆಯುವಳು ಮನದಾಳದಿ ಕುಳಿತು
ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು
ಶಬುದದೊಳಗೊಮ್ಮೆ ಹೀಗೆಯೇ ಅವಿತು
ಕಾಡಿಸುವ ಬಾಲೆ ಬರೆಸುತ್ತಾಳಿವಳು
ಅಂಬೆಗಾಲನ್ನಿಡುವ ಹಸುಳೆ ಇನ್ನೂ ಮುಗ್ಧೆ!..
ತೊದಲುವುದನ್ನಿವಳಿನ್ನೂ ಬಿಟ್ಟೇ ಇಲ್ಲ
ವರುಷಗಳುರುಳಿದಂತೆ ಹರುಷ ಪಡಬಹುದೇನೋ!?
ಮುದ್ದಿನ ಮಾತೆರಡು ನುಡಿಯಬಹುದೇನೋ?…
ಭವಿತವ್ಯದಲ್ಲಿ ಗಟ್ಟಿ ಹೆಜ್ಜೆ ಊರಿಯಾಳು,
ಅಚ್ಚಳಿಯದಂತೆ ಮನದಿ ನೆಲೆಗೊಂಡಾಳು
ಕಾಯುತ್ತೆನಲ್ಲಿಯವರೆಗೂ ಬೇಸರವಿಲ್ಲ ಮಗಳೆ
ಎಷ್ಟಾದರೂ ನೀ,ನಾ ಹೆತ್ತ ಪ್ರೀತಿಯ ಕವಿತೆಯಲ್ಲವೆ!
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಚೆನ್ನಾಗಿದೆ ಕವಿತೆ 👍
Super ji