ಅರಿತೋ ಅರಿಯದೋ ನಾ ಮಾಡಿದೆ ನಿನ್ನ ಸ್ನೇಹಾ
ತಿಳಿದೋ ತಿಳಿಯದೋ
ನನ್ನ ಕಣ್ಣಲ್ಲಿ ನೀ ಚಿತ್ರಿಸಿ ಬಿಟ್ಟೆ
ನಿನ್ನ ಒಲವ ನೇಹಾ
ಅದೇಕೋ ನಾ ಪ್ರತಿಕ್ಷಣ ಬಯಸಿರುವೆ ನಿನ್ನ ಸನಿಹ
ನನ್ನವರ ವಾತ್ಸಲ್ಯದ ಮಡಿಲಲ್ಲಿ ಬಂದಿಯಾಗಿದೆ ಈ ನನ್ನ ದೇಹ
ಕೊಂಚ ಕೊಂಚವೇ ಕುಂಚ ಬಣ್ಣ ಬಳಿವಂತೆ
ನೀ ಅವರಸಿದೆ ನನ್ನ ಕನಸಿನ ಬದುಕ
ನಾ ಕಟ್ಟಿನಿಂತೆ ಸಾವಿರಾರು ಕನಸ ಕನಕ
ನಾಳಿನ ನಮ್ಮಿಬ್ಬರ ಸಾಗುವ ದಾರಿಯಲ್ಲಿ
ಸವಿಯಲು ಒಂದಿಷ್ಟು ಸುಖದ ಕ್ಷಣವ ಕೊನೆತನಕ
ನನಗು ಆಸೆ ಇದೆ ನನ್ನ ಕನಸಿನ ರಾಜಕುಮಾರನ
ರಾಣಿಯಾಗಿ ಬದುಕಲು
ಆದರೇಕೋ ಈ ಜಾತಿ ನೀತಿ ಎಂಬಾ ಸಮಾಜದ ಕಟ್ಟಳೆ
ನನ್ನ ಕಟ್ಟಿ ಹಾಕುತ್ತಿದೆ ಇನಿಯ ನಿನ್ನ ನಾ ಸೇರಲು
ಬಿಡಿಸಿಕೊಳ್ಳಬಲ್ಲೆ ಈ ಅರ್ಥವಿಲ್ಲದ ಜಾತಿ ಸಂಕೋಲೆ
ಆದರೆ ನಾ ಹೇಗೆ ಕಡಿದು ಬರಲಿ ಗೆಳೆಯ ನನ್ನ
ಹೆತ್ತವರ ಪ್ರೀತಿ ನಂಬಿಕೆ ತುಂಬಿದ ಆಸರೆಯ ಬಲೆ
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…