ಕವಿತೆಗಳು

ಶ್ರೇಯಸ್ ಪರಿಚರಣ್ ಅವರು ಬರೆದ ಕವಿತೆ ‘ಪರದೆಗಳು’

ಹಾಗೇ ನೋಡಿದ್ರೆ ತಕ್ಷಣ ಏನೂ ಗೊತ್ತಾಗೋಲ್ಲ-
ಜರೂರು ಬೇಕು ಒಂದು ಸೂಕ್ಷ್ಮಾವಲೋಕನ
ಒಂದು ಕನ್ನಡಕ + ಜೊತೆಗೆ ಅಂತರ್ದೃಷ್ಟಿಯು
ಪ್ಲಸ್ಸು-ಮಜಬೂತಾದ ಜೀವನ-ದರ್ಶನವೂ

ಇದೇ ರಸ್ತೆ ಏಳನೇ ಮನೆಯಲ್ಲೇ ಮೊನ್ನೆ ಹೆರಿಗೆ-
ಅದೇ ದಿನ ಹೆಚ್ಚು ಕಡಿಮೆ ಅದೇ ಗಳಿಗೆ-
ಅದೇ ಮನೆ ಎದುರಿಗೇನೇ-ಆಯಿತೊಂದು ಸಾವು ;
ಇದೀಗ ಕನ್ನಡಕ + ಇತ್ಯಾದಿ ತಾವು ಧರಿಸಿ-ಭರಿಸಬೇಕು

ನೋಡಿ…ನೋಡೀ…ನೋಡಿದಷ್ಟೂ ಪರದೆಗಳೇ
ಒಂದರ ಬೆನ್ನ ಹಿಂದೆ ಇನ್ನೊಂದು-ಅದರ ಹಿಂದೆ ?
ಆ…ಅದರ ಹಿಂದೆ ಇನ್ನೊಂದು-ಇನ್ನೊಂದರ್ಹಿಂದೆ !
ತೊಗೋಳಿ…ಮತ್ತೆ…ಮತ್ತೊಂದು-ಮಗದೊಂದು
ಅರೆರೆ…ಇದೇನ್ರಿ ! ಇಗೋ ನೋಡಿ ಅದರ ಹಿಂದೆ
ಇದು ಮುಗಿಯಲ್ಲ-ಇನ್ನೊಂದಿದೆ ಅದರೊಳಗಡೆಯೆ
ಒಳಗಡೆಯೇನು-ಒಂದೊಳಕೋಣೆ-ಮಂಚದ ಮೇಲೆ ?
ಮಲಗಿಬಿಟ್ಟಿದಾರೆ-ಏಳೋದ ಮರೆತು-ಚಿರಶಾಂತಿಯೇ !

ಆಹಾ ನೋಡಿ…ಆ…ಆ…ಒಂದು ಕಣ್ಣು-ಹೌದು‌-ಕಣ್ಣು !!
ಎಂಟೂ+ ದಶಕ-ಎಷ್ಟೋಂದು ಕಾಣ್ಕೆ-ಒಂದದ್ಭುತವು
ಆ…ಕಣ್ಣಿನೊಳಗೆ ಏನು ಮಹತ್ತು…ಕಂಡುಬಿಡ್ತು ?
ಇದೇನಿದು!…’ಬಿಡ್ತು’–ಅನ್ನಿ–ಹಾಗೆ ಹೇಳಬಾರ್ದು !
ಅದೇ…ಆ….ಅವರು ಪರಂಧಾಮಯ್ಯನೋರು !
ಈಗಾ- ‘ಪರಂಧಾಮ’-ನ್ನೇ ಸೇರಿಬಿಟ್ಟೋರು !
ಸ್ವಲ್ಪವೇ ಮುಂಚೆ-ಪರಂಧಾಮವನ್ನೈದಿದೋರು
ಹಾಗೆಲ್ಲಾ ನಗಬಾರದೂ ! ಎರಡೂ ಕಣ್ಣ ಮುಚ್ಬೇಕಿತ್ತು !
ಮುಚ್ಚೋಕ್ಮುಂಚೆ ಏನ್ನೋಡ್ತಿದ್ರು / ಕೇಳ್ಬಾರದೇನೂ ?
ನಗ್ಬೇಡ !–please–ಅದನ್ನವರ್ನೇ ಕೇಳ್ಬೇಕು !

ಪರಂದೂ ಮಾಮ ಬಹಳ / ಶ್ಯಾನೇ… ನೋಡ್ದೋರು
ನೋಡಿದ್ದೆಲ್ಲಾ ಯಾರಿಗೂ ಏನೂ ಹೇಳ್ದೆ ಹೋಗಿಬಿಟ್ಟರು
ಒಳಗೆ ನೋಡು–ಏನಾದ್ರೂ ಬರೆದಿಟ್ಟಿದಾರೇನು
ಅವರ ಕಣ್ಣೊಳಗಲ್ಲಾ-ಹಿಂದೆ-ಹಿಂದಿನ ರೂಮೊಳಗೆ !
ಇರಲಿಬಿಡು…ನೋಡಿದ್ದೆಲ್ಲಾ ಬರೆಯಕ್ಕಾಗಿರಲ್ಲಾ
ಬರೆದಿರೋರೆಲ್ಲಾ ಪೂರ್ತಿ ನೋಡಿರೋದಿಲ್ಲಾ
ಏನೂ ನೋಡದೇ ಇರೋರೂ ಇದ್ದಾರಲ್ಲಾ
ಜೊತೆಗೆ ಏನೂ ಬರೀದೇ ಇರೋರೂ ಇದ್ದಾರಲ್ಲಾ
ನೋಡ್ದೆ–ಬರೀದೆ…ಬರಿದೆ ಸುಮ್ಮನಿದ್ದಾರಲ್ಲಾ
ನೋಡ್ಲೇ ಬೇಕಾ…ಬರೆಯದೆ…ಸುಮ್ಮನಿರದೆ
ನೋಡಿ…ಬರೆದು..ಹಾಗೇ…ಸುಮ್ಮನಿರಬಾರದೇ
ಏನೂ ಮಾಡದೆ ಸುಮ್ನಿದ್ದು ಹೋಗ್ಬಾರದೇ ?

ಪರಂಧಾಮಯ್ಯನೋರ ವಿಷಯ ಬಿಟ್ಟು ಬಿಡಿ
ಇದ್ರು-ಇನ್ನಿಲ್ಲ-ಈಗ-“ಬಿಟ್ಟ ಕಣ್ಣು-ತೆರೆದ ಬಾಯಿ”
ಬದುಕಿನ ಪರದೆ-ಪದರಗಳ ಲೆಕ್ಕ ಯಾರಿಗ್ಗೊತ್ರಿ ?

ಸಿಗೋದಿಲ್ಲ… ಬರಿಗಣ್ಣಿಗೆ…ಒಟ್ಟದರ ಮೊತ್ತ
ಲೆಕ್ಕ ನಿಲ್ಲೋಲ್ಲಾ-ಏನಿದೆ…ಏನಿದೆ…ಅದರ್ಹಿಂದೇನಿದೆ
ಹಿಂದೆಯಿದೆ ಖಂಡಿತಾ-ಏನೂ ?ಇನ್ನೊಂದು-‘ಹಿಂದೆ’
it is a-“wall”-which can be seen through
& through…forever but unseen enough

‘ಮೆಟಾಫಿಸಿಕ್ಸ್’-ಒಂದು ಪದ-ಅದಲ್ಲಿದೆಯೇ-?
ಈವರೆಗೂ ಕಾಣದೋನೂ ಅಲ್ಲಿರಬಹುದೇ -?

ಹೋದ್ವಾರದ ಪ್ರವಚನದ ತತ್ವ ಅಲ್ಲಿರಬಹುದೇನ್ರಿ-?
ಇಲ್ಲಿ ಮುಗಿದ ಹೋದ ಜೀವಗಳೆಲ್ಲವುಗಳ ವಿಳಾಸ-
ಈ ಪರದೆ-ಪದರಗಳ ಹಿಂದೆ !!!-“ಅವನ-ಸದ್ವಿಲಾಸ” !
ಪರಂಧಾಮಯ್ಯನೋರು ಆ-“ಅವನನ್ನು”-ಕಂಡಿದ್ದರೇ..
ಹುಡುಕ್ತಿದ್ದದ್ದು ಸಿಕ್ಕಿಬಿಟ್ಟು ಕೂಡಲೇ-ಹೋಗ್ಬಿಟ್ಟರೇ!!

ಪದ-ಪದರ-ಪರದ(ಪರದೆ)-ಗಳ ಹಿಂದೆ ಹೋದರೆ-
-ನೋಡ್ರಿ ! ಕಳ್ಕೊಂಡೀರಿ ನಿಮ್ಮ ಮನೆಯ ವಿಳಾಸವೇ !!
ಕಂಡದ್ದರ ಹಿಂದೆ…ಅದರ್ಹಿಂದೆ…ಇನ್ನದರಹಿಂದೆ-
ಏನಾದರೂ ಒಂದಲ್ಲ ಒಂದು ಇದ್ದಿರಬಹುದಲ್ಲವೇನ್ರೀ

ಸದ್ಯಕ್ಕೀಗ ಆ…ಹೂ…ಆ-“ಒಂದಕ್ಕೆ”-ನೋಡಿ-ನಿನ್ತುಬಿಟ್ರು
ಒಂದನ್ನು ಒಡೀತಾ ಹೋಗಿ…ಮತ್ತೆ ಆ ಚೂರನ್ನು-
-ಚೂರಾದ ಮಗದೊಂದು ಚೂರನ್ನೂ ಇನ್ನೊಂದು-
-ಸಣ್ಣ… ಅತಿ…ಸಣ್ಣ…ಚೂರು-ಅಣುವಷ್ಟು ಸೈಜು !
ಇನ್ನದರ ಚೂರಿಲ್ಲ-“ಅದು ಚೈತನ್ಯ”-ಅಂದೇ ಬಿಟ್ಟರು !!!
ದಿವಂಗತ ಪರಂಧಾಮಯ್ಯನೋರು ಅದ ಕಂಡಿದ್ದರ ?

ದಿವಂಗತರಾಗೋರೆಲ್ಲಾ-“ಆ…ಅದ”-ಕಂಡೇ ಹೋಗಿರ್ತಾರ-
ನೋಡೀ ಸರ್!–ಹೆಚ್ಚು–“ಕಣ್ಣಲ್ಲೇ ಪ್ರಾಣ ಹೋಗಿರೋರು”-!
ಸಾವೆಲ್ಲೇ ಆಗಲಿ…ಹೇಗೇ ಇರಲಿ…ಜನ ಒಂದೇ ಹೇಳೋದು-
“ಕಣ್ಣಲ್ಲಿ ಪ್ರಾಣ ಹೋಗಿದೆ”-ಯಥಾವತ್ ಸ್ಟೇಟ್-ಮೆಂಟು!

ಇದೆಲ್ಲವಿರಲಿ-ಆ-ನವಜಾತನ್ನ ನೋಡಕ್ಕೆ-ಓಡೋಡಿ ಬನ್ನಿ-
ಯಾವುದೇ ಮಗು ಎಲ್ಲೇ ಹುಟ್ಟಲಿ-ನೋಡೋದಕ್ಕೆ ಹೋಗಿ !!

SHANKAR G

View Comments

  • ಹೃತ್ಪೂರ್ವಕ ಧನ್ಯವಾದಗಳು, Sir...

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago