ಮೇದಿನಿಯನಿನಿಯನೇ, ಮರೆತೆ ಏನು ನಿನ್ನ ನೀನು?
ತನ್ನತನವ ಮರೆತರೇನು?
ಭಿನ್ನ ಭಿನ್ನ ರೂಪ ತಾಳಿದರೇನು?
ಸುರಿಯಲೊಲ್ಲದೆ ಸಾಗಿದರೇನು?
ಕಿರಿದು ಹನಿಯ ಕಚಗುಳಿಯನಿಕ್ಕಿ,
ಇಳೆಯ ಮಲೆಗಳ ತಬ್ಬಿ , ಸವರಿ,
ಕೊಸರಿಕೊಳ್ವ ಅವಳ ಉಸಿರಲಿ ಉಸಿರು ಬೆರೆಸಿ
ಹನಿಸದೇ ಹೋದರೇನು ಫಲ!
ತಬ್ಬಿ ನಿನ್ನ ತಂಪುಗೊಳ್ಳಲಿ ಅವಳು,
ಬಿಸಿಲು ಬೇಗೆಗೆ ಬೆಂದ ಜೀವ,
ವಸುಧೆಯಾದರೇನು, ಕಸುವು ಕನಲಿದೆ,
ತೋಷಗೊಳಿಸದೆ ತೇಲಿ ಹೋದರೇನು ಫಲ!
ರೂಪದೊಡನೆ ಜನಿಸಿತು ಆಸೆ,
ಚಲುವಿನೊಳಗೆ ಒಲವು ಮೂಡಿ
ಒಲವನಲ್ಲಿ ಮೊಳಕೆ ಒಡೆದ
ಮೋಹ ದಾಹ ಮಿಲನ ಮೈಥುನಕ್ಕೆಳೆಯದೆ
ಬರಿದೆ ಸಾಗಿದರೇನು ಫಲ!
ಬೀಜ ಹೊರಳಿ ಕ್ರಮಿಸಲಿ ದಾರಿ,
ತರು, ಲತೆ,ಗಿಡ,ಮರ,ಬಳ್ಳಿಯಾಗಿ,
ಪತ್ರೆ, ಪುಷ್ಪ, ಫಲಂಗಳೆಂಬ ನಾಮ ರೂಪಗಳನು ದಾಟಿ
ಮತ್ತೆ ಬೀಜವಾಗಿ ಮೈವೆತ್ತಲಿ ಜಗದ ಹಸಿವು ಹಿಂಗಲಿ
ಓಡಿ ಓಡಿ ಹೋದರೇನು ಫಲ!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಕವಿತೆ ತುಂಬಾ ಚೆನ್ನಾಗಿದೆ 👌👌ಸರ್