ಕವಿತೆಗಳು

ಸುವರ್ಣ ಕುಂಬಾರ ಯಲ್ಲಾಪುರ ಅವರು ಬರೆದ ಕವಿತೆ ‘ವೈರಾಗ್ಯದಲಿ ಅರಳುದ ಪ್ರೀತಿ’

 

ನನಗೂ ಬಂತು ಇಂದು
ವೈರಾಗ್ಯ
ಆ ಮಹಾಯೋಗಿಯಲಿ
ಅನುರಾಗ
ಪ್ರೀತಿ ಮಾಡಲು ನಾ
ಹೊರಟಿರುವೆ ಇದುವೆ
ಸುಯೋಗ
ನನ್ನ ಮತ್ತೆ ಮಹಾದೇವನ
ನಡುವೇ ಈ ಭೂಲೋಕದ
ದೋಖಾ….

ಕಣ್ಣರೆಪ್ಪೆಯಲಿ ಅವನದೆ
ಚಿತ್ರ ಪಟ
ನನ್ನ ಮನವಾಗಬೇಕಿದೆ
ಅವನ ಧ್ಯಾನದಲ್ಲಿ
ಗಾಳಿಪಟ
ಸೂತ್ರ ಹಿಡಿದು ಆಡಿಸುವವನ
ಮುಂದೆ ನನ್ನ ಓಟ
ಅವ ಬಿಡುವ ಮೊದಲು
ನಾ ಅವನ ಸೇರಬೇಕೆನ್ನುವುದು
ನನ್ನ ಹಠ

ತರಲೆನಿದೆ ನನ್ನಲ್ಲಿ
ನೀ ಕೊಟ್ಟ ಕಾಯ
ನೀ ಇಟ್ಟ ಛಾಯ
ನೀ ಬಿಟ್ಟ ಮಾಯ
ನಿನ್ನಲ್ಲಿ ಕರಗುವಾ ಲೀಲಾ
ಕೈ ಮುಗಿಯುವೆ ನಾ ಇಂದ
ಬಂದು ಕಾಣೋ ನನ್ನ ಒಮ್ಮ

ಮನ ಹೇಳುತ್ತಾದ ಇಂದ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ನಿರಾಕಾರ ನಿತ್ಯ ಸತ್ಯ
ಸೌಂದರ್ಯ ಸ್ವರೂಪ
ಲೀಲಾಧರ ನಿಮ್ಮ ನೆನೆಯುತ್ತ
ಮನ ಹೇಳುತ್ತಿದೆ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ

SHANKAR G

View Comments

Share
Published by
SHANKAR G

Recent Posts

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago