ಕವಿತೆಗಳು

ಸುವರ್ಣ ಕುಂಬಾರ ಯಲ್ಲಾಪುರ ಅವರು ಬರೆದ ಕವಿತೆ ‘ವೈರಾಗ್ಯದಲಿ ಅರಳುದ ಪ್ರೀತಿ’

 

ನನಗೂ ಬಂತು ಇಂದು
ವೈರಾಗ್ಯ
ಆ ಮಹಾಯೋಗಿಯಲಿ
ಅನುರಾಗ
ಪ್ರೀತಿ ಮಾಡಲು ನಾ
ಹೊರಟಿರುವೆ ಇದುವೆ
ಸುಯೋಗ
ನನ್ನ ಮತ್ತೆ ಮಹಾದೇವನ
ನಡುವೇ ಈ ಭೂಲೋಕದ
ದೋಖಾ….

ಕಣ್ಣರೆಪ್ಪೆಯಲಿ ಅವನದೆ
ಚಿತ್ರ ಪಟ
ನನ್ನ ಮನವಾಗಬೇಕಿದೆ
ಅವನ ಧ್ಯಾನದಲ್ಲಿ
ಗಾಳಿಪಟ
ಸೂತ್ರ ಹಿಡಿದು ಆಡಿಸುವವನ
ಮುಂದೆ ನನ್ನ ಓಟ
ಅವ ಬಿಡುವ ಮೊದಲು
ನಾ ಅವನ ಸೇರಬೇಕೆನ್ನುವುದು
ನನ್ನ ಹಠ

ತರಲೆನಿದೆ ನನ್ನಲ್ಲಿ
ನೀ ಕೊಟ್ಟ ಕಾಯ
ನೀ ಇಟ್ಟ ಛಾಯ
ನೀ ಬಿಟ್ಟ ಮಾಯ
ನಿನ್ನಲ್ಲಿ ಕರಗುವಾ ಲೀಲಾ
ಕೈ ಮುಗಿಯುವೆ ನಾ ಇಂದ
ಬಂದು ಕಾಣೋ ನನ್ನ ಒಮ್ಮ

ಮನ ಹೇಳುತ್ತಾದ ಇಂದ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ನಿರಾಕಾರ ನಿತ್ಯ ಸತ್ಯ
ಸೌಂದರ್ಯ ಸ್ವರೂಪ
ಲೀಲಾಧರ ನಿಮ್ಮ ನೆನೆಯುತ್ತ
ಮನ ಹೇಳುತ್ತಿದೆ
ಹರ ಹರ ಹರ ಮಹಾದೇವ
ಹರ ಹರ ಹರ ಮಹಾದೇವ

SHANKAR G

View Comments

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago