ಕತ್ತಲೋಡಿತು ಬೆಳಕು ಮೂಡಿತು
ದಿನಪ ಮೂಡಿದ ಸೂಚನೆ
ಮೃಗ ಖಗ ಸಕಲ ಕುಲಕೆ
ಹೊಟ್ಟೆ ತುಂಬುವ ಯೋಚನೆ
ರಂಗುರಂಗಿನ ಕಿರಣ ಹಾಸಿ
ಬೆಳಕ ನಗೆಯನು ಚೆಲ್ಲಿದ
ಜಗದ ಒಳಿತಿಗೆ ಬಂದನೆಂಬುದ
ಗ್ರಹಿಸಿ ಎದ್ದನು ಬಲ್ಲಿದ
ಸಸ್ಯಕಾಶಿಯ ಅಡುಗೆ ಕೋಣೆಗೆ
ಶಕ್ತಿ ತುಂಬಿದ ದಿನಕರ
ಸುಮವ ಸೋಕಿ ಸಿಹಿಯ ಹೀರಿ
ಗೆದ್ದು ಬೀಗಿದ ಮಧುಕರ
ಗೂಡ ತೊರೆದು ಪಕ್ಷಿ ಸಂಕುಲ
ಕಾಳ ಹೆಕ್ಕುತ ನಡೆಯಲು
ಕಾದು ಕುಳಿತ ಮರಿಗಳೆಲ್ಲಾ
ಬಾಯ ತೆರೆದು ಮುಕ್ಕಲು
ಆವಿ ಸೆಳೆದು ಮಳೆಯ ತರಲು
ಬೇಕೇ ಬೇಕು ನೇಸರ
ಭಾರಿ ಸೆಕೆಯು ಎನುವುದೊಂದೇ
ಎಲ್ಲರೊಳಗೂ ಬೇಸರ
ತಾನೂ ಬೆಳಗಿ ಸೋಮನನ್ನೂ
ಇರುಳ ಬೆಳಕಾಗಿ ಬೆಳಗಿಸಿ
ಮಕ್ಕಳೆಲ್ಲರ ಮಾಮ ಅವನು
ಎನುವ ಭಾವವ ಮೂಡಿಸಿ
ಜಗದ ಚಲನೆಗೆ ಬೇಕೇ ಬೇಕು
ಸೂರ್ಯನೆಂಬೋ ಗೆಳೆಯನು
ಇಲ್ಲವೆಂಬುದ ನೆನೆದರೊಮ್ಮೆ
ತಾಳಲಾಗದು ನೋವನು
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
ತುಂಬಾ ಸೊಗಸಾಗಿದೆ ಗೆಳೆಯ
ಧನ್ಯವಾದಗಳು ಗೆಳೆಯ
ಚೆನ್ನಾಗಿದೆ 👍
ಮೊಟ್ಟಮೊದಲಿಗೆ ಮಿಂಚುಳ್ಳಿ ಬಳಗಕ್ಕೆ ಧನ್ಯವಾದಗಳು.. ಮಿಂಚುಳ್ಳಿಯಲ್ಲಿ ಪ್ರಕಟವಾದ ಚೊಚ್ಚಲ ಬರಹವಿದು. ನನ್ನ ಕವಿತೆಗೆ ಸ್ಥಾನ ನೀಡಿದ ಮಿಂಚುಳ್ಳಿಗೆ ಆಭಾರಿ 🙏🙏
ಚೆನ್ನಾಗಿದೆ. ಅಭಿನಂದನೆಗಳು.