ಕವಿತೆಗಳು

ಶಿವಕೀರ್ತಿ ಅವರು ಬರೆದ ಕವಿತೆ ‘ಕಾಡು ಹೂವು’

ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?
ಮುದವಿಲ್ಲ ಎನಗೆ ಮಂದಾರದಂತೆ
ಸುಗಂಧವಿಲ್ಲ ಮಲ್ಲಿಗೆಯಂತೆ
ಹೆಣ್ಣಿನ ಮುಡಿಗು ಸೇರಲಾರೆ,
ದೇವರ ಅಡಿಗು ಬೀಳಲಾರೆ,
ಮಸಣದ ಹಾದಿಯನ್ನು ಹಿಡಿಯಲಾರೆ
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?

ಮುಳ್ಳನ್ನೆ ಅರಮನೆಯಾಗಿಸಿಕೊಂಡವಳು ನಾನು
ಕಾಡುವ ಕೈಗಳ ಭಯವೇನು
ನಿಂತಲ್ಲೇ ಅರಳುವೆ ತಾಪಕ್ಕೆ ಕರಗದೆ
ಜೀವಿಸುವೆ ಜೀವನದ ಕ್ಷಣಗಳನ್ನು ಪೈಪೋಟಿಗಿಳಿಯದೆ
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?

ಸಾರ್ಥಕತೆಯ ಮೆರೆವ ಹೂಗಳ ಸಾಲಿನವಳಲ್ಲ ನಾನು
ಕೇಡ ಬಯಸದೆ ಬದುಕುವುದೇ ಸಾರ್ಥಕತೆಯಲ್ಲವೇನು
ವಿಷವಿರಬಹುದು ಎನ್ನೊಳಗೆ ಕುಟಿಲತೆಯಿಲ್ಲ
ಮುಖವಾಡದ ಪ್ರಪಂಚದಲ್ಲಿ
ನಾನಿನ್ನೂ ನಾನಾಗಿಯೇ ಇರುವೆನು
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?

ಶಿವಕೀರ್ತಿ
ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ತುಮಕೂರು ವಿಶ್ವವಿದ್ಯಾಲಯ
ಡಿ.ಜಿ.ಹಟ್ಟಿ, ಮಿಡಿಗೇಶಿ (ಹೋಬಳಿ), ನೇರಳೇಕೆರೆ (ಪೊಸ್ಟ್)
ಮಧುಗಿರಿ (ತಾ), ತುಮಕೂರು (ಜಿ)
SHANKAR G

View Comments

  • ಕಾಡಲ್ಲಿ ಬೆಳೆದ ಹೂವಿಗೆ ಎಷ್ಟೊಂದು ನಿರಾಸೆ
    ನಾಡಲ್ಲಿ ಬೆಳೆದ ಹೂವನ್ನು ನೋಡುವ ಆಸೆ

Share
Published by
SHANKAR G

Recent Posts

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago