ಕವಿತೆಗಳು

ಸಂತೋಷ್ ಹೆಚ್ ಜಿ ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಅನ್ನದಾತ’

ಹರಿದ ಬಟ್ಟೆ ಹಸಿದ ಹೊಟ್ಟೆ
ತಿಂಗಳಾದರೂ ತಂಗಳೇ ಮೃಷ್ಟಾನ್ನ
ಜಗಕೆಲ್ಲ ಅನ್ನ ನೀಡುವವನಿತ
ಹಿಡಿ ಅನ್ನಕ್ಕೆ ಪರದಾಡುವನೀತ
ಇವ ನಮ್ಮ ರೈತ.

ಭರವಸೆಯಲ್ಲಿ ಹೊಲ ಹಸನವ ಮಾಡಿ
ಉಳ್ಳವರ ಪಾದವನ್ನು ಕಾಡಿ-ಬೇಡಿ
ಸಾಲ ಸೋಲವನು ಮಾಡಿ
ಕಾಳು ಗೊಬ್ಬರವನ್ನು ತಂದಿಹನು
ಇವ ನಮ್ಮ ರೈತ.

ಕಣ್ಣಗಲಿಸಿ ಮುಗಿಲ ನೋಡುವನು
ಸುರಿಯುವುದು ಮಳೆಯೆಂದು
ನಮಿಸಿ ಬಿತ್ತುವುನು ಭೂ ತಾಯಿ ಮಡಿಲಿಗೆ
ನೂರಾರು ಕನಸು ಚಿಗುರುವ ಪೈರಿನ ಬಗೆಗೆ
ಇವ ನಮ್ಮ ರೈತ.

ಕಣಜ ತುಂಬುವ ಕನಸೇಕೊ ಕಮರುತಿದೆ
ಬಿಳಿ ಮೋಡ ತೇಲುತಿದೆ ಹನಿ ಮಳೆಯಿಲ್ಲದೆ
ಮಡದಿ ಮಕ್ಕಳೆಲ್ಲ ಉಪವಾಸ;
ಕರುಣಿಸು ಮಳೆ ದೇವ ನಿನ್ನಡಿಗೆ ನಾ ದಾಸ
ಇವ ನಮ್ಮ ರೈತ.

ಜಾನುವಾರಕೆ ಜಗದಲ್ಲಿ ಮೇವಿಲ್ಲದಾಗಿದೆ
ಬಡ ರೈತನ ದೇಹ ಬಡಕಲಾಗಿದೆ
ಅಂಚೆಯಲಿ ಬ್ಯಾಂಕಿನ ನೋಟಿಸು ಬಂದಾಯ್ತು
ಬದುಕಿಗೆ ಬರ ಸಿಡಿಲು ಮತ್ತೆ ಬಡಿದಾಯ್ತು
ಇವ ನಮ್ಮ ರೈತ.

ದಿಕ್ಕು ಕಾಣದೆ ದಿಕ್ಕೆಟ್ಟು ಓಡುತಿಹ
ತುಸು ಹಸಿರಾದ ಹುಣಸೆ ಮರದ ಕಡೆಗೆ
ಹಗ್ಗದ ಕುಣಿಕೆ..ಪಾಷಣದ ಜೊತೆಗೆ
ಬೇಡ-ಬೇಡ ನೀ ನಮ್ಮ ಅನ್ನದಾತ
ನೀನೆಂದು ಅಮರ,ನೀನೆಂದು ಅಮರ
ನೀ ನಮ್ಮ ರೈತ ಅನ್ನದಾತ..

SHANKAR G

Share
Published by
SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago