ನನ್ನೆದೆಯ ಒರತೆ
ಬರಡು ಮರುಭೂಮಿಯಲ್ಲಿ
ಅಲ್ಲಲ್ಲಿ ಉಕ್ಕಿ ಮರೆಯಾಗುವ
ಕೊಳದಿ ಬಳಲಿದ
ಹಸಿರು ಬನದ ಅಂತ್ಯವಿಲ್ಲದ
ಸಾಲು ಸಾಲು ಹೂಗಳು
ನಿನ್ನದೋ ಬಾಗಿದ
ಎಳಸುಪ್ರಾಯ..
ಗೀಚಲು ಬಲು ಸುಲಭವೇನಲ್ಲ.
ಇತ್ತ ದಾಂಗುಡಿಯಿಟ್ಟ
ಕನವರಿಕೆಗಳ ಕಾರುಬಾರು
ಮತ್ತದೇ ಬರಿ ಕನಸುಗಳ ನೆಪದ ಬ್ರಾಂತಿ
ಒಮ್ಮೊಮ್ಮೆ
ಇರುಳು ಬೆಳಕಿನ ಹಾಗೆ
ಹಗೆ ತುಂಬಿದ ಹಟ ಬಿದ್ದ ಮನಸು
ಕನಸಿನ ಮುಲಾಜಿಲ್ಲದೆ
ಬಿಕರಿಯಾಗಲು ತಿಳಿಹನಿಯ
ರಾಜಿ ಬಯಸಿದೆ..
ಒಂದಿಷ್ಟು ಹಂಚಿಬಿಡಲೇ?
ಅಸಾಧ್ಯದ ಮುಗುಳುನಗೆ
ಬಿಡುವಿಲ್ಲದ ಕಡಲ ನಗೆ ತೀರ
ನನ್ನೊಡಲ ಬಿಳಿ ಹಾಲು ನೊರೆಯ
ಗೊಡವೆ ಗೋಜಲುಗಳಿಲ್ಲದ
ಮರೀಚಿಕೆಯ ಮಜಲುಗಳು
ಸದಾ ಸನಿಹ ಬಯಸುವ
ಮನಕೆ ಮಂಥನದ ಔತಣ
ಬಿಟ್ಟು ಬಿಡದ ಕಣ್ಣ ಹನಿಗೆ
ಸುಖಾಸುಮ್ಮನೆ ಹಾತೊರೆವ
ನಿರ್ಲಿಪ್ತ ಭಾವಜೀವಿಗೆ
ಇಂದು ನಿನ್ನೆಗಳ ಬರ…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
Very nice satish
ಸೊಗಸಾದ ಕವಿತೆ ಸೂಪರ್ ✌️
ಸೊಗಸಾದ ಸಾಲುಗಳು ಮನಮುಟ್ಟುತ್ತವೆ ಸರ್ ಸೂಪರ್
Very nice 👌
ತುಂಬಾ ಚೆನ್ನಾಗಿದೆ
ಬಲು ಅದ್ಭುತ ಕವಿತೆ
Good
ಚಂದದ ಕವಿತೆ sir