‘
ಮನವಿದು ರೌದ್ರವಾದಂತೆಲ್ಲ,
ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ.
ಮುಡಿದ ಸಿಂಧೂರ ಅವನಿಂದ ನೊಂದು
ರುಧಿರದಂತೆ ಗೋಚರಿಸುತ್ತಿದೆ.
ಮೂರುಗಂಟಿನ ನಂಟಿನಾಚೆಗೆ
ಅಂಟದಿಹ ಭಾವ ನೂರು,
ಮೌನದ ಮೊರೆಹೋಗಿ ಆಡದೇ
ಉಳಿದ ಮಾತು ಸಾವಿರಾರು,
ನನ್ನ ಕನಸುಗಳಿಗೆ ಜಾಗ ಕೊಡದೆ ಕೊಂದಿಹರು,
ಅಸಹಾಯಕತೆ ನೋಡಿ ಗಹಗಹಿಸುತಿಹರು.
ಪ್ರಕೃತಿಯ ಅಣು ಅಣುವಲೂ ನನ್ನ ಆರಾಧಿಸುವವರು,
ಮಾತಿನಲ್ಲೇ ಮನೆಯ ಮಾಡಿ ತುಳಿದು ಹತ್ತುತಿಹರು,
ಬೆಲೆಯಿಲ್ಲದ ಬದುಕಿನಿಂದ ಹೊರಬಂದು,
ಕಟ್ಟುಪಾಡುಗಳ ಕಟ್ಟೆಯೊಡೆದು,
ಜಗದೆಲ್ಲ ಜಂಜಡಗಳ ತೊರೆದು,
ನಡೆಯಬೇಕಿದೆ ನಾನು.
ಹಾರಬೇಕಿದೆ ನಾನು ದಿಗ್ ದಿಗಂತದಾಚೆಗೆ,
ತಲುಪಬೇಕಾಗಿದೆ ನಾನು ಕನಸುಗಳ ಊರಿಗೆ,
ಸೇರಬೇಕಿದೆ ನಾನು ಸಾಂತ್ವನದ ಸೂರಿಗೆ,
ಸಂಭ್ರಮಿಸುತ ಮರಳಬೇಕಿದೆ ನಾನು,
ನನ್ನ ಅಸ್ತಿತ್ವದ ತವರಿಗೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಚಂದ