‘
ಮನವಿದು ರೌದ್ರವಾದಂತೆಲ್ಲ,
ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ.
ಮುಡಿದ ಸಿಂಧೂರ ಅವನಿಂದ ನೊಂದು
ರುಧಿರದಂತೆ ಗೋಚರಿಸುತ್ತಿದೆ.
ಮೂರುಗಂಟಿನ ನಂಟಿನಾಚೆಗೆ
ಅಂಟದಿಹ ಭಾವ ನೂರು,
ಮೌನದ ಮೊರೆಹೋಗಿ ಆಡದೇ
ಉಳಿದ ಮಾತು ಸಾವಿರಾರು,
ನನ್ನ ಕನಸುಗಳಿಗೆ ಜಾಗ ಕೊಡದೆ ಕೊಂದಿಹರು,
ಅಸಹಾಯಕತೆ ನೋಡಿ ಗಹಗಹಿಸುತಿಹರು.
ಪ್ರಕೃತಿಯ ಅಣು ಅಣುವಲೂ ನನ್ನ ಆರಾಧಿಸುವವರು,
ಮಾತಿನಲ್ಲೇ ಮನೆಯ ಮಾಡಿ ತುಳಿದು ಹತ್ತುತಿಹರು,
ಬೆಲೆಯಿಲ್ಲದ ಬದುಕಿನಿಂದ ಹೊರಬಂದು,
ಕಟ್ಟುಪಾಡುಗಳ ಕಟ್ಟೆಯೊಡೆದು,
ಜಗದೆಲ್ಲ ಜಂಜಡಗಳ ತೊರೆದು,
ನಡೆಯಬೇಕಿದೆ ನಾನು.
ಹಾರಬೇಕಿದೆ ನಾನು ದಿಗ್ ದಿಗಂತದಾಚೆಗೆ,
ತಲುಪಬೇಕಾಗಿದೆ ನಾನು ಕನಸುಗಳ ಊರಿಗೆ,
ಸೇರಬೇಕಿದೆ ನಾನು ಸಾಂತ್ವನದ ಸೂರಿಗೆ,
ಸಂಭ್ರಮಿಸುತ ಮರಳಬೇಕಿದೆ ನಾನು,
ನನ್ನ ಅಸ್ತಿತ್ವದ ತವರಿಗೆ.
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಚಂದ