ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ
ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ
ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ!
ನಗರ ಸುಖದ ಮುಂದೆ ನಾ ಮರೆತಿದ್ದೆ ನನ್ನೂರ ನನ್ನೋರ!
ಒಂದೆರಡು ದಿನದ ಅತಿಥಿಯಾಗಿದ್ದೆ ನಾ ನನ್ನೂರಿಗೆ
ಜಾತ್ರೆ ಆಯನ, ದೇವ ಪೂಜೆ , ಮದುವೆ ಗೌಜಿಗೆ
ಆರೈಕೆ ಹಾರೈಕೆ ಜೊತೆಗೆ ತಿಂಡಿ ತಿನಿಸು ಪೊಟ್ಟಣ!
ಮರಳಿ ಸೇರುತ್ತಿದ್ದೆ ಭಾವರಹಿತ ಪಟ್ಟಣ!
ಹಳೆಯ ನೆನಪು ಹಿಂದೆ ಸರಿಯಿತು ಹೊಸ ಬದುಕಿನ ನೆಪದಲಿ
ಮನದ ತುಂಬಾ ಮರೆವು ತುಂಬಿತು ರಂಗು ರಂಗಿನ ಗುಂಗಲಿ
ಸಾಗಿದೆ ಬದುಕಿನ ಪಯಣ ಬಿಡುವಿಲ್ಲದೇ..ಹುಟ್ಟೂರ ಕಾಣದೆ!
ಹೆಸರು ಧನವಗಳಿಸೋ ಭರದಿ ಕಾಲ ಕಾಲವಾಗಿದೆ!
ಮಕ್ಕಳಿಬ್ಬರು ಬೆಳೆದರಿಲ್ಲೇ ನನ್ನೂರಿಗೆ ಬರಿಯ ನೆಂಟರಾಗಿ
ಬದುಕ ಕಟ್ಟಿಕೊಂಡರಿಲ್ಲೇ ಸಂಬಂಧಗಳರಿವಿಲ್ಲದೆ
ಪ್ರೀತಿ ಮಡದಿ ಮಡಿದು ನಾನಿಗ ಏಕಾಂತ ವಿರಾಗಿ!
ಇಳಿಸಂಜೆ ಬದುಕೀಗಾ ಹುಟ್ಟೂರ ಬಯಸುತಿದೆ!
ಮರಳಿ ಅರಳ ಬಯಸಿದೆ ಮನ ಹುಟ್ಟೂರ ನೆಲದಲಿ
ಕಾಣಬಯಸಿದೆ ಉದಯಾಸ್ತ ರವಿಯ ಮೇಘಮಾಲೆ ನಡುವಲಿ
ಮೊದಲ ಮಳೆಯ ಇಳೆಯ ಕಂಪು ತಂಪು ತಂಗಾಳಿ ಜೊತೆಯಲಿ!
ಬದುಕ ಬೇಕು ಚಿರನಿದಿರೆವರೆಗೂ ನನ್ನೂರ ಮಡಿಲಲಿ!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಅರ್ಥಪೂರ್ಣ ಬರಹ ✍️✍️