ವಯಸ್ಸು ಮಾಗಿ ತನುವು ಬಾಗಿ
ಕೂದಲೆಲ್ಲ ಬಿಳಿ ಮೋಡದಂತೆ
ಹೊಳೆಯುತ್ತಿದೆ ಮಿರಿ ಮಿರಿಯಾಗಿ
ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ
ಕೋಲೊಂದೇ ಆಸರೆಯಾಗಿ
ನಿಂತಿದೆ ನನ್ನಯ
ಬಾಳಿನ ಜೊತೆಯಾಗಿ
ಆದರೂ ಮೊಗದಲ್ಲಿ
ಆತ್ಮವಿಶ್ವಾಸದ ನಗುವು
ಪ್ರಜ್ವಲಿಸುತ್ತಿದೆ ಇಂದಿಗೂ
ಬಡಿದಾಡಿದೆ ಹೊಡೆದಾಡಿದೆ
ಗಂಧದ ಕೊರಡಂತೆ ನನ್ನ
ಜೀವ ಜೀವನವನ್ನೇ ತೇದೆ
ನನ್ನವರ ಸೌಖ್ಯಕ್ಕಾಗಿ
ನನ್ನವರ ಖುಷಿಗಾಗಿ
ನನ್ನ ಇಷ್ಟಕಷ್ಟಗಳೇ ಅಳಿದು
ಅವರ ಕನಸುಗಳೇ ನನ್ನ
ಬಾಳಿನ ದ್ಯೇಯವಾಗಿ
ದುಡಿದೆ ದುಡಿದೆ
ದುಡಿಯುತ್ತಲೇ ಹೋದೆ
ವಯಸ್ಸು ಓಡುತ್ತಿತ್ತು
ಶರವೇಗದಲ್ಲಿ
ಮೈಯಲ್ಲಿ ಚೈತನ್ಯವಿತ್ತು
ಅರಿವಾಗಲೇ ಇಲ್ಲ
ನನಗಾಗಿ ನಾನು ಬಾಳಬೇಕೆಂದು,
ನನ್ನವರಿಗಾಗಿಯೇ ದುಡಿದೆ
ಅವರಿಗಾಗಿಯೇ ಬದುಕಿದೆ
ಆದರೆ ಇಂದು ಏಕಾಂಗಿಯಾಗಿ
ನಿಂತಿರುವೆ ಬಾಳಿನ
ಮುಸ್ಸಂಜೆಯಲಿ
ದುಡಿಯಲು ಶಕ್ತಿಯಿಲ್ಲ
ಬೇಡಲು ಮನಸ್ಸಿಲ್ಲ
ನನ್ನವರಿಗೆ ನಾನು
ಬೇಕಾಗಿಲ್ಲ
ಆಗಲಿ ನಾನು ಯಾರಿಗೂ
ಹೊರೆಯಾಗಿ ಬದುಕಲಾರೆ
ಇನ್ನಾದರೂ ನನಗಾಗಿ
ನಾನು ಬಾಳುವೆ
ದುಡಿದು ತಿಂದ ಸ್ವಾಭಿಮಾನಿ
ಕೈಗಳು ಬೇಡಿ ತಿನ್ನಲು ಒಪ್ಪುತ್ತಿಲ್ಲ
ವಯಸ್ಸಾದರೇನು???
ಬದುಕುವ ಛಲವಿದೆ
ಬೀದಿಯಲ್ಲಿ ಹಣ್ಣು ಮಾರಿ
ತನ್ನ ತುತ್ತಿನ ಚೀಲ ತುಂಬಿಸಲು
ಬಿಸಿಲು ಮಳೆಗೆ ಅಂಜದೆ
ಮೊಗದಲ್ಲಿ ಭರವಸೆಯ
ಮುಗುಳುನಗೆಗಂತೂ ಭರವಿಲ್ಲ
ಬದುಕಿನ ಬಂಡಿ
ಹೊಡಿಸುವೆನು
ಜೀವನದ ಕೊನೆಯ
ಉಸಿರುವಿರುವರೆಗೂ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…