ಪ್ರೀತಿ ಕನ್ನಡತಿ ಅವರು ಬರೆದ ಕವಿತೆ ‘ನಗುವಿನ ಒಡತಿ’

ವಯಸ್ಸು ಮಾಗಿ ತನುವು ಬಾಗಿ
ಕೂದಲೆಲ್ಲ ಬಿಳಿ ಮೋಡದಂತೆ
ಹೊಳೆಯುತ್ತಿದೆ ಮಿರಿ ಮಿರಿಯಾಗಿ
ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ
ಕೋಲೊಂದೇ ಆಸರೆಯಾಗಿ
ನಿಂತಿದೆ ನನ್ನಯ
ಬಾಳಿನ ಜೊತೆಯಾಗಿ
ಆದರೂ ಮೊಗದಲ್ಲಿ
ಆತ್ಮವಿಶ್ವಾಸದ ನಗುವು
ಪ್ರಜ್ವಲಿಸುತ್ತಿದೆ ಇಂದಿಗೂ

ಬಡಿದಾಡಿದೆ ಹೊಡೆದಾಡಿದೆ
ಗಂಧದ ಕೊರಡಂತೆ ನನ್ನ
ಜೀವ ಜೀವನವನ್ನೇ ತೇದೆ
ನನ್ನವರ ಸೌಖ್ಯಕ್ಕಾಗಿ
ನನ್ನವರ ಖುಷಿಗಾಗಿ
ನನ್ನ ಇಷ್ಟಕಷ್ಟಗಳೇ ಅಳಿದು
ಅವರ ಕನಸುಗಳೇ ನನ್ನ
ಬಾಳಿನ ದ್ಯೇಯವಾಗಿ
ದುಡಿದೆ ದುಡಿದೆ
ದುಡಿಯುತ್ತಲೇ ಹೋದೆ

ವಯಸ್ಸು ಓಡುತ್ತಿತ್ತು
ಶರವೇಗದಲ್ಲಿ
ಮೈಯಲ್ಲಿ ಚೈತನ್ಯವಿತ್ತು
ಅರಿವಾಗಲೇ ಇಲ್ಲ
ನನಗಾಗಿ ನಾನು ಬಾಳಬೇಕೆಂದು,

ನನ್ನವರಿಗಾಗಿಯೇ ದುಡಿದೆ
ಅವರಿಗಾಗಿಯೇ ಬದುಕಿದೆ
ಆದರೆ ಇಂದು ಏಕಾಂಗಿಯಾಗಿ
ನಿಂತಿರುವೆ ಬಾಳಿನ
ಮುಸ್ಸಂಜೆಯಲಿ
ದುಡಿಯಲು ಶಕ್ತಿಯಿಲ್ಲ
ಬೇಡಲು ಮನಸ್ಸಿಲ್ಲ
ನನ್ನವರಿಗೆ ನಾನು
ಬೇಕಾಗಿಲ್ಲ

ಆಗಲಿ ನಾನು ಯಾರಿಗೂ
ಹೊರೆಯಾಗಿ ಬದುಕಲಾರೆ
ಇನ್ನಾದರೂ ನನಗಾಗಿ
ನಾನು ಬಾಳುವೆ
ದುಡಿದು ತಿಂದ ಸ್ವಾಭಿಮಾನಿ
ಕೈಗಳು ಬೇಡಿ ತಿನ್ನಲು ಒಪ್ಪುತ್ತಿಲ್ಲ

ವಯಸ್ಸಾದರೇನು???
ಬದುಕುವ ಛಲವಿದೆ
ಬೀದಿಯಲ್ಲಿ ಹಣ್ಣು ಮಾರಿ
ತನ್ನ ತುತ್ತಿನ ಚೀಲ ತುಂಬಿಸಲು
ಬಿಸಿಲು ಮಳೆಗೆ ಅಂಜದೆ
ಮೊಗದಲ್ಲಿ ಭರವಸೆಯ
ಮುಗುಳುನಗೆಗಂತೂ ಭರವಿಲ್ಲ
ಬದುಕಿನ ಬಂಡಿ
ಹೊಡಿಸುವೆನು
ಜೀವನದ ಕೊನೆಯ
ಉಸಿರುವಿರುವರೆಗೂ

SHANKAR G

Share
Published by
SHANKAR G

Recent Posts

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago