ಓ ಮಳೆಯೇ ನೀ ಸುರಿಯೇ..
ನಬೆಯ ಕಪ್ಪಾದ ಮೋಡದಿ,
ಗುಡುಗು ಮಿಂಚಿನ
ರೌದ್ರ ನತ೯ನದ,
ದಶ೯ನವ ತೋರು
ಇಳೆಯು ಬಿರು ಬಿಸಿಲಿಗೆ
ಬೆಂದು ಬೆಂಡಾಗಿ ಹೋಗಿಹಳು,
ನಿನ್ನ ಆಸೆ ಕಂಗಳಿಂದ ನೋಡುತಿಹಳು,
ಓ ಮಳೆಯೇ ನೀ ಸುರಿದು,
ಅವಳ ಒಡಲನು ತಂಪೆರಚು
ಕೆರೆ ಕಟ್ಟೆಗಳು ಜೀವಕಳೆ ಇಲ್ಲದೇ
ಒಣಗಿ ನಿಂತಿವೆ,
ಪ್ರಾಣಿ ಪಕ್ಷಿಗಳು ನೀರಿಗಾಗಿ
ಹಪಹಪಿಸುತ್ತಿವೇ,
ನೀ ಬೇಗ ಸುರಿಯೇ,
ಕೆರೆ ಕಟ್ಟೆಗಳೆಲ್ಲಾ ಮೈದುಂಬಿ ಹರಿಯಲಿ,
ಪ್ರಾಣಿ ಪಕ್ಷಿಗಳ ಒಡಲಿಗೆ ತಂಪೆರದು,
ಅವುಗಳ ಚಿಲಿಪಿಲಿ ನಾದ
ಜೇಂಕರಿಸಲಿ ಎಲ್ಲೆಲ್ಲೂ
ರೈತರು ಭೂಮಿಯೆಲ್ಲಾ
ಹಸನು ಮಾಡಿ
ನಿನ್ನ ಬರುವಿಕೆಗಾಗಿ
ಆಸೆ ಕಂಗಳಿಂದ,
ಹಣೆಗೆ ಕೈ ಹಚ್ಚಿ
ಆಕಾಶದಿ ಮುಖ ಮಾಡಿ
ಕಾಯುತ್ತಿರುವರು,
ಓ ಮಳೆಯೇ ನೀ ಸುರಿದರೆ,
ಮುಂಗಾರು ಬಿತ್ತನೆ ಯು
ಬಲು ಜೋರು,
ರೈತರ ಮೊಗದಲ್ಲಿ
ಸಂತಸದ ತೇರು
ಗಿಡ ಮರಗಳೆಲ್ಲಾ
ನೀ ಇಲ್ಲದೇ
ಒಣಗಿ ಬರಡಾಗಿ ನಿಂತಿವೆ,
ನೀ ಸುರಿದರೆ
ಅವೆಲ್ಲಾ ಮತ್ತೆ ಹಚ್ಚ ಹಸಿರಾಗಿ,
ನಿಸಗ೯ ದೇವತೆಯು
ಮೈದುಂಬಿ ನಗುವಳು
ಓ ಮಳೆಯೇ
ನೀ ಇದ್ದರೆ ಸಮೃದ್ಧಿ,
ನಿನ್ನಿಂದಲೇ ಜೀವಕಳೆ,
ನೀನೇ ಸಂತಸದ ಹೊನಲು,
ನೀ ಇದ್ದರೇ ಎಲ್ಲಾ,
ನೀ ಇಲ್ಲದೇ ಹೋದರೆ ಏನಿಲ್ಲ
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
ಜೀವ ಸೃಷ್ಟಿಯ ಕವನ ಚೆನ್ನಾಗಿದೆ
ಧನ್ಯವಾದಗಳು sir ನಿಮ್ಮ ಪ್ರತಿಕ್ರಿಯೆಗೆ