ಕವಿತೆಗಳು

ನಿರಂಜನ ಕೇಶವ ನಾಯಕ ಅವರು ಬರೆದ ಕವಿತೆ ‘ಬಾಮಿಯನ ಬುದ್ಧ’

 

ಜಗಕೆ ಆನಂದವ ಉಣಿಸಿದವನ
ಉಳಿಸದಾಯ್ತು ಈ ಜಗತ್ತು
ದ್ವೇಷದ ಕೂಪದೊಳಗೆ
ಸಿದ್ಧಿಯು ಕೂಡ ಶವವಾಯ್ತು

ಅವಸಾನ ಅವಕಾಶದ ಬೆನ್ನೇರಿ
ಎದುರು ಶೂಲವಾಗಿ ನಿಂತಿತ್ತು
ಆ ನಿರ್ಮಲ ಶಾಂತತೆ ಮಾತ್ರ
ಪ್ರತಿಯ ಇರಿತಕೆ ಉತ್ತರವಾಗಿತ್ತು

ಆಲಯವಾಗಿದ್ದ ಆ ಬಯಲು
ಬರಗಾಲ ಸುಳಿದಂತೆ ಸುಡುತ್ತಿತ್ತು
ಗುಂಡು ಸಿಡಿಮದ್ದಿನ ಸದ್ದು
ಪ್ರಶಾಂತತೆಯ ಅಣಕಿಸಿ ನಗುತ್ತಿತ್ತು

ಇತಿಹಾಸದ ಸುಮ ಬಾಡುತ್ತಿತ್ತು
ಕೋವಿಯ ನಳಿಕೆ ನಗುತ್ತಿತ್ತು
ಮರುಗದ ಜನರು ಗೆದ್ದರು
ಮರುಗುವ ಮಂದಿ ಬಿದ್ದರು

ಅಲ್ಲೀಗ ಸ್ಮಶಾನ ಮೌನ
ಬರಿಯ ಬೋಳು ಗುಡ್ಡ
ಎಲ್ಲವ ಕಬಳಿಸುವ ನಿರ್ವಾತ
ಬರಿಯ ಶೂನ್ಯ ಮಾತ್ರ

SHANKAR G

View Comments

  • ವಾಸ್ತವದ ಚಿತ್ರ ಕವನದಲ್ಲಿದೆ.

  • ಬಹಳ ಸುಂದರವಾಗಿ ಪ್ರಸ್ತುತತೆ ಪ್ರಸ್ತುತಪಡಿಸಿದ್ದಾರಿ.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago