ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು
ನೆನಪುಗಳ ಗೋರಿ ಮೇಲೆ ನಿರ್ಮಿಸು
ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ
ಏಕೆಂದರೆ ಕಳೆದದ್ದು ನಮ್ಮದಲ್ಲ;
ನಾಳೆಗಳು ನಮ್ಮವು!
ಇಲ್ಲದ್ದರ ಬಗ್ಗೆ ಚಿಂತೆ ಬಿಟ್ಟು ಬಿಡು
ವರ್ತಮಾನದ ಇರುವಿಕೆಯ ಒಟ್ಟುಗೂಡಿಸು
ಅವಕೃಪೆಗಳ ಮೀರಿ ಬೆಳೆದು ನಿನ್ನತನಕೆ
ನವಶಕ್ತಿ ಗಳಿಸು ಈ ದಿನ;ಆಗ
ನಾಳೆಗಳು ನಮ್ಮವು!
ಸುಟ್ಟುಬಿಡು ಕರಕಲಾದ ಕಾರಣಗಳು
ಅವು ನಿನ್ನವಲ್ಲವೆಂದ ಮೇಲೆ ಅಳಿಸು
ಕಳೆಗುಂದಿದ ಅವಕೆ ಹೊಸ ರಂಗು ನೀಡಿ
ನವರೂಪ ನೀಡು ಇಂದು; ಆಗ
ನಾಳೆಗಳು ನಮ್ಮವು!
ದಕ್ಕಿಸಿಕೊಂಡು ನಡೆ ಕಷ್ಟ, ಕಹಿಸತ್ಯಗಳ
ಅನುಭವಗಳು ನಾಳೆಗೆ ಸೋಪಾನವೆಂದು
ಜಗದ ಭೀತಿಗೆ ತೆರೆಯೆಳೆದು,ಸಡ್ಡೊಡೆ ಸಾಧನೆಗೆ
ದೃಢ ನಿರ್ಧಾರ ಮಾಡಿಂದು; ಆಗ
ನಾಳೆಗಳು ನಮ್ಮವು!
ತ್ಯಜಿಸಿಬಿಡು ವಿಚಾರಹೀನ ಕ್ಷುಲಕಗಳ
ಪರರ ಮನೆ ಸಾಯಿಸುವ ಅವ ನೀ ಸಾಯಿಸು
ಬಣ್ಣದೊಳಗಿನ ಬದುಕ ನೀ ಬದಲಾಯಿಸು
ಬದುಕೇ ಬಣ್ಣವಾಗುವಂತೆ ಇಂದು; ಆಗ
ನಾಳೆಗಳು ನಮ್ಮವು!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…