ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು
ನೆನಪುಗಳ ಗೋರಿ ಮೇಲೆ ನಿರ್ಮಿಸು
ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ
ಏಕೆಂದರೆ ಕಳೆದದ್ದು ನಮ್ಮದಲ್ಲ;
ನಾಳೆಗಳು ನಮ್ಮವು!
ಇಲ್ಲದ್ದರ ಬಗ್ಗೆ ಚಿಂತೆ ಬಿಟ್ಟು ಬಿಡು
ವರ್ತಮಾನದ ಇರುವಿಕೆಯ ಒಟ್ಟುಗೂಡಿಸು
ಅವಕೃಪೆಗಳ ಮೀರಿ ಬೆಳೆದು ನಿನ್ನತನಕೆ
ನವಶಕ್ತಿ ಗಳಿಸು ಈ ದಿನ;ಆಗ
ನಾಳೆಗಳು ನಮ್ಮವು!
ಸುಟ್ಟುಬಿಡು ಕರಕಲಾದ ಕಾರಣಗಳು
ಅವು ನಿನ್ನವಲ್ಲವೆಂದ ಮೇಲೆ ಅಳಿಸು
ಕಳೆಗುಂದಿದ ಅವಕೆ ಹೊಸ ರಂಗು ನೀಡಿ
ನವರೂಪ ನೀಡು ಇಂದು; ಆಗ
ನಾಳೆಗಳು ನಮ್ಮವು!
ದಕ್ಕಿಸಿಕೊಂಡು ನಡೆ ಕಷ್ಟ, ಕಹಿಸತ್ಯಗಳ
ಅನುಭವಗಳು ನಾಳೆಗೆ ಸೋಪಾನವೆಂದು
ಜಗದ ಭೀತಿಗೆ ತೆರೆಯೆಳೆದು,ಸಡ್ಡೊಡೆ ಸಾಧನೆಗೆ
ದೃಢ ನಿರ್ಧಾರ ಮಾಡಿಂದು; ಆಗ
ನಾಳೆಗಳು ನಮ್ಮವು!
ತ್ಯಜಿಸಿಬಿಡು ವಿಚಾರಹೀನ ಕ್ಷುಲಕಗಳ
ಪರರ ಮನೆ ಸಾಯಿಸುವ ಅವ ನೀ ಸಾಯಿಸು
ಬಣ್ಣದೊಳಗಿನ ಬದುಕ ನೀ ಬದಲಾಯಿಸು
ಬದುಕೇ ಬಣ್ಣವಾಗುವಂತೆ ಇಂದು; ಆಗ
ನಾಳೆಗಳು ನಮ್ಮವು!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…