ಕವಿತೆಗಳು

ಶಾರದಾಸಿಂಗ್ ಶ್ರಾವಣಸಿಂಗ್ ರಜಪೂತ ಅವರು ಬರೆದ ಕವಿತೆ ‘ನಾಳೆಗಳು ನಮ್ಮವು!’

ಕಳೆದದ್ದು ಕಳೆದ್ಹೋಯ್ತು ಬಿಟ್ಟು ಬಿಡು
ನೆನಪುಗಳ ಗೋರಿ ಮೇಲೆ ನಿರ್ಮಿಸು
ಹೊಚ್ಚ ಹೊಸ ಇತಿಹಾಸ ನವಪೀಳಿಗೆಗೆ
ಏಕೆಂದರೆ ಕಳೆದದ್ದು ನಮ್ಮದಲ್ಲ;
ನಾಳೆಗಳು ನಮ್ಮವು!

ಇಲ್ಲದ್ದರ ಬಗ್ಗೆ ಚಿಂತೆ ಬಿಟ್ಟು ಬಿಡು
ವರ್ತಮಾನದ ಇರುವಿಕೆಯ ಒಟ್ಟುಗೂಡಿಸು
ಅವಕೃಪೆಗಳ ಮೀರಿ ಬೆಳೆದು ನಿನ್ನತನಕೆ
ನವಶಕ್ತಿ ಗಳಿಸು ಈ ದಿನ;ಆಗ
ನಾಳೆಗಳು ನಮ್ಮವು!

ಸುಟ್ಟುಬಿಡು ಕರಕಲಾದ ಕಾರಣಗಳು
ಅವು ನಿನ್ನವಲ್ಲವೆಂದ ಮೇಲೆ ಅಳಿಸು
ಕಳೆಗುಂದಿದ ಅವಕೆ ಹೊಸ ರಂಗು ನೀಡಿ
ನವರೂಪ ನೀಡು ಇಂದು; ಆಗ
ನಾಳೆಗಳು ನಮ್ಮವು!

ದಕ್ಕಿಸಿಕೊಂಡು ನಡೆ ಕಷ್ಟ, ಕಹಿಸತ್ಯಗಳ
ಅನುಭವಗಳು ನಾಳೆಗೆ ಸೋಪಾನವೆಂದು
ಜಗದ ಭೀತಿಗೆ ತೆರೆಯೆಳೆದು,ಸಡ್ಡೊಡೆ ಸಾಧನೆಗೆ
ದೃಢ ನಿರ್ಧಾರ ಮಾಡಿಂದು; ಆಗ
ನಾಳೆಗಳು ನಮ್ಮವು!

ತ್ಯಜಿಸಿಬಿಡು ವಿಚಾರಹೀನ ಕ್ಷುಲಕಗಳ
ಪರರ ಮನೆ ಸಾಯಿಸುವ ಅವ ನೀ ಸಾಯಿಸು
ಬಣ್ಣದೊಳಗಿನ ಬದುಕ ನೀ ಬದಲಾಯಿಸು
ಬದುಕೇ ಬಣ್ಣವಾಗುವಂತೆ ಇಂದು; ಆಗ
ನಾಳೆಗಳು ನಮ್ಮವು!

SHANKAR G

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago