ಕವಿತೆಗಳು

ಕೆ. ಪಿ. ಮಹಾದೇವಿ ಅರಸೀಕೆರೆ ಅವರು ಬರೆದ ಕವಿತೆ ‘ಮುಂಗಾರ ಕನಸು’

ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ,
ಹಸನಾದ ಮೇಲೆ ಭರಣಿ ತುಂಬದ
ಮುಂಗಾರ ಕನಸುಗಳು…

ಆರ್ಭಟಿಸುವ ಆರಿದ್ರಕ್ಕೆ
ಕಂಪಿಸುತ್ತಾ, ಹಿಂಗಾರ ಕನಸುಗಳ
ಮೂಟೆಯನು ಬಿತ್ತನೆಗೆ ಬಿಚ್ಚುವಾಗ,
ಎದೆನೆಲವೆಂಬುದು ಹದಗೊಂಡ ಹರೆಯ.
ಧರೆಯ ತುಂಬಾ ಗಟ್ಟಿಗೊಂಡ
ಹಸಿರು. ಅಲ್ಲಲ್ಲಿ ತುಂಬಿಕೊಂಡ
ನಿರೀಕ್ಷೆಯ ಹೊಂಡಗಳು

ಎದೆಯ ಕಸುವನ್ನೆಲ್ಲಾ
ನೆಲದ ನಂಬಿಕೆಯ ಮೇಲೆ
ಕುಸುರಿ ಕೂರಿಗೆಯ ಕಣ್ಣೊಳಗೆ
ಸಾಲುಸಾಲಾಗಿ ಉರುಳಿಸಿ,
ಹುಬ್ಬೆಗೆ ಉಬ್ಬಿ ಚಿಪ್ಪೊಡೆದು,
ನಗ್ನಸತ್ಯಕೆ ಎದೆ ಸೆಟೆದು
ಉತ್ತರೆಯ ಅಕ್ಕರೆಯ ಆಸರೆಗೆ
ಜೀವಕಳೆ ಮೈದುಂಬಿ,
ಟೊಂಕಕಟ್ಟಿದ ಶ್ರಮಕ್ಕೆ ಕಣ್ತುಂಬಿ,
ಭೋರಿಡುವ ಅತ್ತಚಿತ್ತರಿಗೆ
ತತ್ತರಿಸಿದ ತುಂಬು ತೆನೆಗಳು
ನೆಲಕಚ್ಚದೆ ನಿಲದಲ್ಲೇ ನಿಲ್ಲುವುದು
ಕಾಂಡಕ್ಕೇರಿದ ನೆಲದ ನಿಜ ಸಾರಕ್ಕೆ ಬಿಟ್ಟದ್ದು.

ಕಾಲದಾಟದ ಒಳಗೆ,ಸಾರವೋ
ನಿಸ್ಸಾರವೋ ಪಾಲಿಗೆ
ಬಂದ ಭಾಗ್ಯವನು ಒಪ್ಪಗೊಳಿಸಲು
ಕಂತೆ ಕಟ್ಟಲೇಬೇಕು, ಸುಗ್ಗಿ ಆಸೆಗೆ
ಕಣದೊಳಗೆ ಅರೆದು ನುರಿದು
ಜೊಳ್ಳು ಗಟ್ಟಿಗಳ ತೂರಿಕೊಳ್ಳಲು
ಅದೃಷ್ಟದ ಗಾಳಿಗೆ ಒಡ್ಡಲೇಬೇಕು

ಜಗದ ಸಂತೆಯಲಿ ಸುಗ್ಗಿ ಸರಕದು ಸಸ್ತ.
ಲೋಕತಕ್ಕಡಿಯ ಹಿಡಿದವನ ಮುಂದೆ
ಇಟ್ಟು ಮಾರುವ ಚತುರಕಲೆಯೂ ವ್ಯರ್ಥ.
ಲಾಭನಷ್ಟದ ಲೆಕ್ಕ ಕೇರಿತೂರುವುದರೊಳಗೆ
ಬದುಕು ಬೇಸಿಗೆಯ ಬಟಾಬಯಲ ಆಗಸ

ಕಾಲಚಕ್ರದ ಗಾಲಿಗೆ ಸಿಕ್ಕ ಮನ ಅರಸುತಿದೆ
ಬಿಸಿಗಾಳಿ ತಂಗಾಳಿ ಕೂಡಿದ ಸುಂಟರಗಾಳಿ
ಹೊತ್ತು ತರುವುದೆ ಎಲ್ಲಾದರೊಂದು ಮೋಡ
ಉಬ್ಬುಬ್ಬಿ ಉಬ್ಬಸಗೊಂಡ ಸೆಖೆ ರಾತ್ರಿಯಲಿ
ಕಂಡೀತೆ ಈಶಾನ್ಯ ದಿಕ್ಕಿನಲೊಂದು ಮಿಂಚು.
ನನಸಾಗುವುದೆ ಮತ್ತೆ ಹೊನ್ನಾರು ಕಟ್ಟುವ ಕನಸು.

SHANKAR G

View Comments

Share
Published by
SHANKAR G

Recent Posts

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago