ಹರಿವ ನದಿ ತೀರದಲ್ಲಿ
ಕಾದು ಕುಳಿತಿಹ ರಾಧೆ,
ಕೃಷ್ಣನ ಮುರಳಿಯ ರಾಗಕ್ಕೆ,
ಸೋತು ಮೈ ಮರೆತಳು ಅಲ್ಲೇ..
ಮಾಧವನ ಮುರಳಿಯ ಗಾನಕೆ,
ಪ್ರಾಣಿ ಪಕ್ಷಿಗಳು ಮೈ ಮರೆತು,
ಪ್ರಕೃತಿಯಲ್ಲಿ ಸೇರಿ ಹೋಗಿಹವು,
ಮುರಳಿಯ ನಾದದಲಿ ಬೆರೆತು.
ನದಿಯ ಜುಳು ಜುಳು ನಾದ,
ಹಕ್ಕಿಗಳ ಮಧುರ ವಿನೋದ,
ಅದರ ನಡುವೆ ಮೋಹದಿ ರಾಧೆ,
ಪ್ರಿಯನ ನೆನೆದು ಕಳೆದು ಹೋಗಿಹಳು.
ಬರಬೇಕು ಈಗ ಮಾಧವನೇ,
ಅವಳನ್ನು ಕರೆಯಲು ಇಹಲೋಕಕ್ಕೆ ,
ಮಾಧವನಿದ್ದರೆ ರಾಧೆ,
ರಾಧೆ ಎಂದರೆ ಮಾಧವ.
ಅವರೀರ್ವರ ಮಧುರ ಪ್ರೇಮಕ್ಕೆ,
ಸಾಟಿ ಎಲ್ಲಿಹುದು?!
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಧನ್ಯವಾದಗಳು ಪ್ರಕಟಣೆಗಾಗಿ🙏🏼💐🙏🏼