ಏನೆನ್ನಲಿ ಗೆಳೆಯ ನಿನ್ನ ಬಗ್ಗೆ,
ಒಳ್ಳೆಯವನೆಂದೊ ಕೆಟ್ಟವನೆಂದೊ,
ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ..
ನೀನು ಕತ್ತಲೆಯ ಕೆಳಗೆ ನಿಂತು,
ಬೆಳಕಿನ ಪ್ರಪಂಚವನ್ನು ನೋಡುತ್ತಿರುವೆ.
ಹಾಗಾಗಿ ನೀನು ಯಾರಿಗೂ ಕಾಣಿಸುತ್ತಿಲ್ಲ.
ಆದರೆ ನಿನಗೋ ಎಲ್ಲವೂ ಸ್ಪುಟ.
ಬೆಳಕಿಗೆ ಬಂದು ನಿನ್ನ ಬಾಳ ಕತ್ತಲೆಗೂ ಬೆಳಕ ಹರಿಸು…
ಆಗ ಕಾಣುವುದೆಲ್ಲಾ ನಿಚ್ಚಳ.
ನೀನೂ,ನಿನ್ನ ಬದುಕು,ಹಾಗೂ ನೀ ನೋಡುವ ನೋಟ,
ಎಲ್ಲವೂ ಬೆಳ್ಳಂಬೆಳಕಾಗಲಿ,
ಪ್ರಪಂಚವನ್ನೇ ಬೆಳಗಿದರೂ ಹಣತೆ,
ಹೋಗಲಾಡಿಸಲಾಗಲಿಲ್ಲ ತನ್ನ ಕೆಳಗಿನ ಕತ್ತಲೆಯ.
ಹಾಗೆಯೇ ಪ್ರಪಂಚವನ್ನೇ ತಿದ್ದಬಲ್ಲವರು,
ತಮ್ಮನ್ನು ತಾವು ತಿದ್ದಿಕೊಳ್ಳಲಾರರು.
ಬೇರೆ ದೀಪವೇ ಬೇಕು,
ಆ ದೀಪದ ಕೆಳಗಿನ ಕತ್ತಲೆಯ ಓಡಿಸಲು.
ಹಾಗೆಯೇ ಬೇರೆ ವ್ಯಕ್ತಿಯ ಬೇಕು,
ನಿನ್ನ ಮನ ಕರಗಿಸಲು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
Supper atte
ತುಂಬಾ ಚೆನ್ನಾಗಿದೆ
ಪ್ರಕಟಣೆಗಾಗಿ ಧನ್ಯವಾದಗಳು💐 🙏🏼