ಗಂಡರೈವರಿಗೂ ಗಂಡೆದೆ ಇತ್ತು!
ಜಗತ್ತೇ ಬಲ್ಲದದನು.
ಬಿಟ್ಟರೆ ಎದೆಯನು ಸೀಳುವ ಕಲಿಗಳು
ಚಿತ್ತವನರಿಯದೆ ತೆಪ್ಪಗೆ ಕೂತರು
ದುರಾಳನೊಬ್ಬ ಮುಂದಲೆಗೆ
ಕೈಯಿಟ್ಟು ಸೆಳೆದಾಗ
ಅದೇ ಕೈಗಳು ಸೆರಗಿಗೆ ಜಾರಿದಾಗ!
ಭೀಮ ಹಲ್ಲು ಕಚ್ಚುತ್ತಿದ್ದ; ಆತನಿಗೋ ?
ಎಲ್ಲರಿಗಿಂತ ಕೊಂಚ ಅನುರಾಗ
ನನ್ನ ಮೇಲೆ.. ಆದರೂ…
ಪಾಪ ! ಅಣ್ಣನಾಜ್ಞೆಯನು ಮೀರದಾದ !
ಆಜ್ಞೆ…?! ಯಮನ ಮಗನ ಕಟ್ಟಾಜ್ಞೆ !
“ಅವನೊಬ್ಬ ತಿಳಿಗೇಡಿ!”
ತಪ್ಪೇನುವಿರಾ ಇದನು ?
ಬಾಯಿ ಜಾರಿದ ಮಾತಲ್ಲ !
ಬೇಕಂತಲೇ ನುಡಿದ ತಿರುಳು.
ಅರ್ಜುನ.. ಅಬ್ಬಾ ! ಬಿಲ್ವಿದ್ಯೆ ಪ್ರಮೀಣ !
ಶಿವನಿಂದ ಪಾಶುಪತಾಸ್ತ್ರ ಪಡೆದವನು.
ಸಕಾಲಕ್ಕೆ ಸಲ್ಲದ ಶಸ್ತ್ರಗಳ
ಒಡೆಯನಿಗೆ ಏನೆನ್ನಬೇಕೋ?
ಭೂತ ಭವಿಷ್ಯಗಳ ಬಲ್ಲವನಂತೆ
ಸಹದೇವ ? ದಿವ್ಯಜ್ಞಾನಿ !
ಬಾಯ್ತೆರೆದರೆ ಸಾವಿತ್ತೆ ?
ಸಾವೇ ಹೆಚ್ಚಾಯ್ತೆ ?
ಸಮರ್ಥಿಸಲು ಸಮಯವಿಲ್ಲ
ಅವನಿಗಾ ಅಸಹಾಯಕ;
ನಕುಲ ? ಪಾಪ ಅಮಾಯಕ!
ಮತ್ಸ್ಯದೇಶದೊಳ್ ಕೀಚಕ ಬೆನ್ನತ್ತಿದಾಗ
ಎಲ್ಲಾ ಎಲ್ಲೆಗಳ ಮೀರಿದವನು
ಕಂಬನಿಯೊಡನೆ ಮಿಡಿದವನು
ಕಲಿಭೀಮ ! ನನ್ನ ಬಲಭೀಮ !
ಉಳಿದವರಿಗೇನು ಹಕ್ಕುಂಟು;
ನನ್ನ ಪಕ್ಕದಲ್ಲಿರಲು ?
ಗಂಡನೋರ್ವನೆ ನನಗೆ !
ಭೀಮನಷ್ಟೆ; ನಾ ಭೀಮನಿಗಷ್ಟೇ !
ಜಗಕೆ ನಾನು ಪಾಂಚಲಿಯಾದರೂ
ಪಾಂಡವೈವರ ಅರ್ಧಾಂಗಿಯಾಗಲಾರೆ,
ನನ್ನನ್ನೇ ನಾನು ಚೂರುಗೊಳಿಸಲಾರೆ
ಏಕೆಂದರೆ
ನನ್ನ ಹೃದಯ ಸದಾ ನಿಷ್ಕಲ್ಮಶ !
ಅನುರಾಗವೂ ಕೂಡ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…