ಕವಿತೆಗಳು

ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

 

ಅವ್ವ ಯಾವಾಗಲೂ ಹೇಳುತ್ತಿದ್ದಳು :
“ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!”
ನನಗದು ಅರ್ಥವಾಗಲಿಲ್ಲ,
ಆತ ಬದುಕಿರುವವರೆಗೂ !

ಖರ್ಚಿಗೆ ಕಾಸು ಬೇಕಾದಾಗಲೆಲ್ಲಾ
ಆತನೆದೆರು ಗೋಳಿಡುತ್ತಿದ್ದೆ;
ಪರೀಕ್ಷೆ, ಫೀಸು, ನೆಪವೊಡ್ಡುತ್ತಿದ್ದೆ !
ಮುಗ್ಧ; ಇತ್ತ ಹೋಗಿ ಅತ್ತ ಬಂದು
ಹಣವ ಕಿಸಿಯೊಳಿಡುತ್ತಿದ್ದ !

ಹಣವೆಲ್ಲಿಂದ ಬಂತು ಅಪ್ಪನಿಗೆ ?
ಅದರ ಯೋಚನೆ ನನಗಿರಲಿಲ್ಲ;
ವೆಚ್ಚಕ್ಕೆ ಹಣ ಸಿಕ್ಕಿತಲ್ಲ ? ಖುಷಿ;
ದುಡ್ಡಿನ ಬೆಲೆ ತಿಳಿಯಲಿಲ್ಲ !

ಅಪ್ಪ ಅಳುತ್ತಿದ್ದ ಆಗಾಗ,
ಕಾರಣವೇನೋ ?
ತಿಳಿದುಕೊಳ್ಳುವ ಸಂಯಮ
ಆ ಕ್ಷಣ ನನಗಿರಲಿಲ್ಲ !

“ದುಡಿಯುತ್ತಾನೆ; ದಣಿಯುತ್ತಾನೆ
ಕೈಜೋಡಿಸು ಮಗನೇ” – ಅವ್ವ
ಎಷ್ಟು ಹೇಳಿದರೂ ಕೇಳಲಿಲ್ಲ.

ಇಂದು ಅಪ್ಪನ ಕೈ ಸೋತಿದೆ
ಹೊಣೆಗಾರಿಕೆ ನನ್ನ ಹೆಗಲೇರಿದೆ
ನಾನೀಗ ದುಡಿಯಲೇಬೇಕು;
ಅನಿವಾರ್ಯ !

ಹಿಂದೆ ಅವ್ವನ ಮಾತಿಗೆ ಕಿವಿಗೊಟ್ಟಿದ್ದರೆ,
ಇಂದು ಅಪ್ಪ ನನ್ನ ಜೊತೆಯಲ್ಲೇ
ಇರುತ್ತಿದ್ದನೇನೋ ? ಈಗಿಲ್ಲ !

ನನ್ನ ದುಡಿಯುವ ಕೈಗಳ ಕಂಡೊಡನೆ,
ಬಹುಶಃ ಆತನ ಸಡಗರಕ್ಕೆ, ಸಂಭ್ರಮಕೆ
ಕೊನೆಯೇ ಇರುತ್ತಿರಲಿಲ್ಲ.

SHANKAR G

Share
Published by
SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago