ಅವ್ವ ಯಾವಾಗಲೂ ಹೇಳುತ್ತಿದ್ದಳು :
“ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!”
ನನಗದು ಅರ್ಥವಾಗಲಿಲ್ಲ,
ಆತ ಬದುಕಿರುವವರೆಗೂ !
ಖರ್ಚಿಗೆ ಕಾಸು ಬೇಕಾದಾಗಲೆಲ್ಲಾ
ಆತನೆದೆರು ಗೋಳಿಡುತ್ತಿದ್ದೆ;
ಪರೀಕ್ಷೆ, ಫೀಸು, ನೆಪವೊಡ್ಡುತ್ತಿದ್ದೆ !
ಮುಗ್ಧ; ಇತ್ತ ಹೋಗಿ ಅತ್ತ ಬಂದು
ಹಣವ ಕಿಸಿಯೊಳಿಡುತ್ತಿದ್ದ !
ಹಣವೆಲ್ಲಿಂದ ಬಂತು ಅಪ್ಪನಿಗೆ ?
ಅದರ ಯೋಚನೆ ನನಗಿರಲಿಲ್ಲ;
ವೆಚ್ಚಕ್ಕೆ ಹಣ ಸಿಕ್ಕಿತಲ್ಲ ? ಖುಷಿ;
ದುಡ್ಡಿನ ಬೆಲೆ ತಿಳಿಯಲಿಲ್ಲ !
ಅಪ್ಪ ಅಳುತ್ತಿದ್ದ ಆಗಾಗ,
ಕಾರಣವೇನೋ ?
ತಿಳಿದುಕೊಳ್ಳುವ ಸಂಯಮ
ಆ ಕ್ಷಣ ನನಗಿರಲಿಲ್ಲ !
“ದುಡಿಯುತ್ತಾನೆ; ದಣಿಯುತ್ತಾನೆ
ಕೈಜೋಡಿಸು ಮಗನೇ” – ಅವ್ವ
ಎಷ್ಟು ಹೇಳಿದರೂ ಕೇಳಲಿಲ್ಲ.
ಇಂದು ಅಪ್ಪನ ಕೈ ಸೋತಿದೆ
ಹೊಣೆಗಾರಿಕೆ ನನ್ನ ಹೆಗಲೇರಿದೆ
ನಾನೀಗ ದುಡಿಯಲೇಬೇಕು;
ಅನಿವಾರ್ಯ !
ಹಿಂದೆ ಅವ್ವನ ಮಾತಿಗೆ ಕಿವಿಗೊಟ್ಟಿದ್ದರೆ,
ಇಂದು ಅಪ್ಪ ನನ್ನ ಜೊತೆಯಲ್ಲೇ
ಇರುತ್ತಿದ್ದನೇನೋ ? ಈಗಿಲ್ಲ !
ನನ್ನ ದುಡಿಯುವ ಕೈಗಳ ಕಂಡೊಡನೆ,
ಬಹುಶಃ ಆತನ ಸಡಗರಕ್ಕೆ, ಸಂಭ್ರಮಕೆ
ಕೊನೆಯೇ ಇರುತ್ತಿರಲಿಲ್ಲ.
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…