ಒಲವ ಬಿತ್ತಿ ಎದೆಯ
ತುಂಬಾ ಕನಸು ಹರವಿ
ನನ್ನೆದೆಯ ಆಸರೆಗೆ ಕಾದು
ಬಯಕೆಗಳ ಬಂಧನದಿ
ಸುಂದರ ಕನಸುಗಳಿಗೆ ಜೀವ
ತುಂಬಿ ನಗು ಮೊಗದಲಿ
ಹೂವರಳಿಸಿ ನಲ್ಮೆಯ ಮಾತು
ಆಡುತ ಹೃದಯ ಬೆಸೆದವಳು
ಕಳೆದು ಹೋದ ಹಳೆಯ ನೆನಪಿನ
ಹಾಯಿ ದೋಣಿಯಲಿ
ಬದುಕಿನ ದಡವ ಸೇರಿಸಿ
ಹೃದಯ ಬೆಸೆದವಳು ನೀನು
ಮಾತು ಮರೆಸಿ ಪ್ರೀತಿ ಅಮೃತ
ತಂದು ಕುಡಿಸಿ ಮತ್ತೆ ಮತ್ತೆ ದಿನಗಳ ರಾತ್ರಿಯಲಿ
ಹೊಸ ನಗೆ ಚಿಮ್ಮಿಸಿ ಹಗುರಾದವಳು
ನಿನ್ನಂತರಂಗದ ಅರಮನೆಯ
ಕದ ತೆರೆದು ನನ್ನ ಆಹ್ವಾನಿಸಿ
ಚೆಲುವನೆಲ್ಲ ಸುರಿದು
ತನ್ನ ಹಗುರಾಗಿಸಿಕೊಂಡವಳು
ನಿನ್ನ ಮರೆಯಲು ಈ ಜನ್ಮ
ಸಾಲದು ಮಧುರ ನೆನಪು
ಮಾಸಲು ಶತಮಾನ ಬೇಕು
ಮುೃದು ಮಾತು ಸಾಕು ಈ ಜೀವಕೆ ಆಸರೆಯಾಗಲು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…