ಕೊರಗುವುದು ಏಕೋ ಪ್ರೀತಿಯ ಗೆಳೆಯ
ಸಂಕಷ್ಟದಿಂದ ನೋಯುವುದು ಹೃದಯ!
ನಾವಂದು ಕೊಂಡಂತೆ ಆಗಿಲ್ಲ ಎಂದು
ನರಳುವುದು ಏಕೆ ಅರಿಯೋ ಬಂಧು
ದೈವದ ನಿಯಮ ಮೀರಲಹುದೆ ನಾವು
ತಾಳ್ಮೆಯಿಂದೆಲ್ಲ ಮರಿಬೇಕು ನೋವು!
ಅಸಹನೆ ಸಿಟ್ಟು ಒಳಿತಲ್ಲ ನಮಗೆ
ಶಾಂತಿ ಸಹನೆ ಇರಬೇಕು ದೊರೆಗೆ
ಸಿಟ್ಟಿಗೆ ಒಳಗಾಗಿ ಮಾಡಿದರೆ ಜಂಭ
ಕುದಿವ ನೀರಲ್ಲಿ ಕಾಣಿಸದು ಬಿಂಬ!
ಕೋಪ ತಾಪ ತರವಲ್ಲ ಗೆಳೆಯ
ತಿಳಿದಿರು ಪಾಪ ಕೂಪದ ವಿಷಯ
ಸಿಟ್ಟು ಜ್ವಾಲೆ ದೂರವಿರು ಮೂಢ
ದುರುಳರ ಸ್ನೇಹ ಬೆಂಕಿಯ ಕೆಂಡ!
ಸಹನೆ ಸೌಹಾರ್ದ ಬದುಕಿಗೆ ಬೆಳಕು
ದುಷ್ಟರ ಸಹವಾಸ ಜೀವನ ಕೊಳಕು
ಸಜ್ಜನರ ಒಡನಾಟ ಸಂತೃಪ್ತಿ ಬದುಕು
ಆನಂದದಿಂದ ಮರೆಯೋಣ ಕೆಡುಕು!
-ಕೆ.ಮಹಾಲಿಂಗಯ್ಯ
ನಿವೃತ್ತ ಕನ್ನಡ ಅಧ್ಯಾಪಕ, ದೊಡ್ಡಬಳ್ಳಾಪುರ.
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…