ಕವಿತೆಗಳು

ಕೆ.ಮಹಾಲಿಂಗಯ್ಯ ಅವರು ಬರೆದ ಕವಿತೆ ‘ಮರೆಯೋಣ ಕೆಡುಕು’

ಕೊರಗುವುದು ಏಕೋ ಪ್ರೀತಿಯ ಗೆಳೆಯ
ಸಂಕಷ್ಟದಿಂದ ನೋಯುವುದು ಹೃದಯ!

ನಾವಂದು ಕೊಂಡಂತೆ ಆಗಿಲ್ಲ  ಎಂದು
ನರಳುವುದು ಏಕೆ ಅರಿಯೋ ಬಂಧು
ದೈವದ ನಿಯಮ ಮೀರಲಹುದೆ ನಾವು
ತಾಳ್ಮೆಯಿಂದೆಲ್ಲ ಮರಿಬೇಕು ನೋವು!

ಅಸಹನೆ ಸಿಟ್ಟು ಒಳಿತಲ್ಲ ನಮಗೆ
ಶಾಂತಿ ಸಹನೆ ಇರಬೇಕು ದೊರೆಗೆ
ಸಿಟ್ಟಿಗೆ ಒಳಗಾಗಿ ಮಾಡಿದರೆ ಜಂಭ
ಕುದಿವ ನೀರಲ್ಲಿ ಕಾಣಿಸದು ಬಿಂಬ!

ಕೋಪ ತಾಪ ತರವಲ್ಲ ಗೆಳೆಯ
ತಿಳಿದಿರು ಪಾಪ ಕೂಪದ ವಿಷಯ
ಸಿಟ್ಟು ಜ್ವಾಲೆ ದೂರವಿರು ಮೂಢ
ದುರುಳರ ಸ್ನೇಹ ಬೆಂಕಿಯ ಕೆಂಡ!

ಸಹನೆ ಸೌಹಾರ್ದ ಬದುಕಿಗೆ ಬೆಳಕು
ದುಷ್ಟರ ಸಹವಾಸ ಜೀವನ ಕೊಳಕು
ಸಜ್ಜನರ ಒಡನಾಟ ಸಂತೃಪ್ತಿ ಬದುಕು
ಆನಂದದಿಂದ ಮರೆಯೋಣ ಕೆಡುಕು!

-ಕೆ.ಮಹಾಲಿಂಗಯ್ಯ
ನಿವೃತ್ತ ಕನ್ನಡ ಅಧ್ಯಾಪಕ, ದೊಡ್ಡಬಳ್ಳಾಪುರ.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago