(1)
ರಿಂಗಣಿಸುವಾಗ
ಹುಡುಕಾಡುತ್ತದೆ ಕೈ
ಜೇಬಿನಿಂದ ಬಾರದ ಶಬ್ದಕೆ!
ಒಮ್ಮೆ ತಡವರಿಸಿ ಮೇಲೆ
ಎಡ ಬಲ ಮುಟ್ಟಿ
ಪುಸ್ತಕ ಹಿಡಿಯುವ
ಕರದೊಳು ಜಪಮಣಿ
ಮಂಪರಿನಲ್ಲೂ ಸಂಶೋಧನೆ!
ಮನಸ್ಸಿನ ಆಳದಗಣಿಗೆ
ಅರ್ಥಕ್ಕೆ ಶಬ್ದಕೋಶ
ಭಾಷಾಂತರಕ್ಕೆ ಭಾಷೆಯ ದಿಶಾ
ದೂರದ ಮುಖಗಳನು
ಎದುರು ಬದಿರಾಗಿಸಿ
ಸಂವಹನಗೊಳಿಸುತ್ತದೆ
ಸ್ಪರ್ಶವಿಲ್ಲದೆ;
ಮುಖದ ಮನೆಯಲ್ಲಿ ಹರ್ಷಬರೆದು
ಶ್ರಾವಣಕೆ ಶಬ್ದ ನೀಡುತ್ತದೆ
ಮಾತುಗಳನು ಕರೆದು
(2)
ಭಾವನೆಗಳೆಲ್ಲ
ಕಡೆಗೋಲಾದಾಗ
ಮಂಥನದಲ್ಲಿ ಅಮೃತ-ವಿಷವು
ಸೇವಿಸುವವರ ತನುವಲ್ಲಿ
ವೈರಲ್ ಟ್ರೋಲ್
ಗಡಿಮೀರಿದ ಕಾಮೆಂಟ್
ಮಾನದ ಮಾತು!
ಮಾಪನದಲ್ಲಿ ಶೇರ್!!
ಮೂಡಿದ ಅಭಿವ್ಯಕ್ತಿಗಳಿಗೆ
ಎಮೋಜಿ ನೀಡಿಕೆ
ವಿಮರ್ಶೆಗೆ ಕರತಾಡನ, ಹೂಗಚ್ಛ ಸಂಭ್ರಮ
ಅಲ್ಲಲ್ಲಿ ಅಭಿನಂದನೆ
ಧನ್ಯವಾದಗಳ ವಿರಾಮ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಚೆಂದದ ಕವಿತೆ ಸರ್ 👍💐💐💐