ಕೀರ್ತನ ಒಕ್ಕಲಿಗ ಬೆಂಬಳೂರು
ನವಮಾಸ ಗರ್ಭದ ನೋವು ನುಂಗಿದವಳು
ಉಸಿರಿಗೆ ಉಸಿರು ಬೆರೆಸಿ ಜೀವ ನೀಡಿದವಳು
ತೊದಲು ನುಡಿಯ ಮೊದಲ ಪದವಾದವಳು
ಅಂಬೆಗಾಲಿಡುವಾಗ ಕೈ ಹಿಡಿದು ನಡೆಸಿದವಳು
ರಕ್ತ ಬೆಸೆದು ಎದೆಹಾಲು ಕುಡಿಸಿದವಳು
ಕೈ ತುತ್ತು ನೀಡಿ ಮಮತೆ ತೋರಿದವಳು
ಮುತ್ತು ನೀಡಿ ಜೋಪಾನ ಮಾಡಿದವಳು
ತನ್ನ ಮಗುವೆಂದು ಎದೆಗವಚಿ ಬೆಳೆಸಿದವಳು
ಹಸಿವು ಎಂದಾಗ ಕೈ ತುತ್ತು ನೀಡಿದಾಕೆ
ಅಳುವಾಗ ಆಸರೆಯಾದಕೆ
ನಿದ್ದೆ ಮಾಡುವಾಗ ಮಡಿಲು ತೋರಿದಾಕೆ
ಪ್ರತಿನಿತ್ಯ ನಮ್ಮ ಒಳಿತಿಗಾಗಿ ಜಪಿಸಿದವಳಾಕೆ
ಹೆಸರು ನೀಡಿ, ಬದುಕಿನ ದಾರಿ ದೀಪವಾದಾಕೆ
ಎಡವಿದಾಗ ಕೈ ಹಿಡಿದು ಎತ್ತಿದಾಕೆ
ತನ್ನೆಲ್ಲಾ ಖುಷಿಗಳನ್ನು ನಮಗಾಗಿ ಮುಡಿಪಾಗಿಟ್ಟವಳಾಕೆ
ನೋವು ಸರಿಸಿ ನಲಿವು ಹಂಚುವಳಾಕೆ
ಬಡತನದ ಬೇಗೆಯಲ್ಲಿ ಬೆಂದು
ನೋವು – ಸಂಕಷ್ಟದಿಂದ ನೊಂದು
ಕಡೆಗಣಿಸುವಳು ನಾನು, ನನ್ನದೆಂದು
ಸದಾ ನಗುವಳು ನನ್ನ ಮಕ್ಕಳೆಂದು
ಸೋತಾಗ ಆತ್ಮಸ್ಥೈರ್ಯ ತುಂಬುವಳು
ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತವಳು
ಪ್ರತಿ ಕ್ಷಣವೂ ನಮ್ಮನ್ನು ಕಾಯುವಳು
ನಿಷ್ಕಲ್ಮಶವಾದ ಹೃದಯವಂತಳು
ನೀ ನನ್ನ ನಗುವಾದೆ
ನನ್ನೆಲ್ಲಾ ನಗುವಾದೆ
ಗೆಲುವಿನ ಮೆಟ್ಟಿಲಾದೆ
ಜೀವನದ ಗುರುವಾದೆ
ನನ್ನೆಲ್ಲಾ ಖುಷಿಯ ಕಾರಣಕರ್ತೆ
ತನ್ನ ಜೀವದ ಆಸೆ ತೊರೆದು
ಇನ್ನೊಂದು ಜೀವಕ್ಕೆ ಉಸಿರಾದ ದೇವತೆ
ಕರುಳು ಬಂಧದ ಮಮತೆ
ನಿನ್ನ ಪ್ರೀತಿಯು ಒಂದು ಮುಗಿಯದ ಕವಿತೆ
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಕವಿತೆಗೊಂದು ವಿಶಿಷ್ಟ ಲಯ ತಂದಿರುವುದು ಮೆಚ್ಚಬೇಕಾದ ಅಂಶ. ಆದರೆ ಉಳಿದಂತೆ ಸಾಧಾರಣ ' ಚರ್ವಿತ - ಚರ್ವಣ ಎನಿಸಿತು.