ಭತ್ತ ಬೆಳೆಯುವ
ಭೂಮಿ , ನೀರಿಗೂ ಇರದ
ಸಂಘರ್ಷ,
ನಾಡಿನ
ದೊರೆಗಳಿಗೇಕೆ;
ಬೀಜ ಹಾಕಿ,ನೀರು ಹರಿಸಿ
ಕೆಲಸ ಮಾಡಿದ
ರೈತನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಮಳೆ ಸುರಿಸಿದ ಮೋಡ
ಬಿಸಿಲು ನೀಡಿದ
ಸೂರ್ಯನಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಮೊಳೆತ ಬೀಜಕೂ
ಬಲಿತ ಭತ್ತಕೂ
ಉಸಿರು ನೀಡಿದ ಗಾಳಿಗೂ
ಇರದ ಸಂಘರ್ಷ
ದೊರೆಗಳಿಗೇಕೆ!
ಉರಿದ ಬೆಂಕಿಗೂ
ಬೆಂದ ಅಗುಳಿಗೂ
ರುಚಿ ನೀಡಿದ
ಉಪ್ಪಿಗೂ ಇರದ
ಸಂಘರ್ಷ
ದೊರೆಗಳಿಗೇಕೆ;
ಹಸಿದ ಹೊಟ್ಟೆಗೂ
ಅನ್ನವಿಟ್ಟ ಕೈಯಿಗೂ
ಕವಳ ಸವಿದ ನಾಲಿಗೆಗೂ
ಇರದ ಸಂಘರ್ಷ
ದೊರೆಗಳಿಗೇಕೆ;
ಬೆಳೆಸಿದ ನಿರ್ಸಗಕೂ
ನೆರಳು ನೀಡಿದ ಮೇಘಕೂ
ಕಾಯುವ ದೇವರಿಗೂ
ಇರದ ಹೆಸರಿನ
ಸಂಘರ್ಷ
ದೊರೆಗಳಿಗೇಕೆ !!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
Sooooooooooooper, ಅದ್ಭುತ ಬರವಣಿಗೆ, ಪಕ್ವ ಬರಹಗಾರರ ಸಾಲಿಗೆ ಸೇರುವ ಅಹ೯ತೆಯಿದೆ.
ಸತ್ಯ... ಸಂಘರ್ಷದ ಹೆಸರಲ್ಲಿ ಅಣ್ಣದಾತಟ್ ಬಡವನಾದ!