ಕವಿತೆಯೆಂದರೆ;
ಮುಂಜಾನೆ ಕಿಟಕಿಯ ತೂರಿ,
ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ
ಶರತ್ಕಾಲದ ಗಾಳಿ.
ಕವಿತೆಯೆಂದರೆ;
ಮುಗಿಲಾಳದ ಹನಿಸಿಡಿದು, ಹಠಾತ್ತನೆ
ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ
ವಸಂತದ ಭೋರ್ಮಳೆ.
ಕವಿತೆಯೆಂದರೆ;
ಎಳೆ ಕಿರಣಗಳ ಹಿತವುಣಿಸಿ,
ನಡುಹಗಲಿನಲ್ಲೇ ನೆತ್ತಿ ಸುಡಲಿಡುವ
ಬೇಸಗೆಯ ಉರಿ
ಕವಿತೆಯೆಂದರೆ;
ಮುಗ್ಗರಿಸಿದ ಮುಗ್ಧ ಮನಸ್ಸಿಗೆ
ಸಾಂತ್ವನದ ಹೆಗಲಾಗಿ, ಬಳಿಸರಿಯುವ
ಕಡಲಿನ ಅಲೆ.
ಕವಿತೆಯೆಂದರೆ;
ನಿದ್ದೆಗೆಟ್ಟ ಕಂಗಳಿಗೆ
ಜೋ ಎನುತ, ಮಡಿಲಾಗುವ
ಹುಣ್ಣಿಮೆಯ ಶಶಿ.
ಕವಿತೆಯೆಂದರೆ;
ಕವಿಯೆದೆಯೊಳಗೆ, ಬೆತ್ತಲಾಗಿದ್ದ ಅಕ್ಷರಗಳು
ಹೊರಬಿದ್ದು, ತೊಟ್ಟುಕೊಂಡ ಬಗೆಬಗೆಯ
ಭಾವನೆಗಳ ಅಂಗಿ.
ಕವಿತೆಯೆಂದರೆ
ಅರ್ಥಗಳೊಳಗೆ ಅಡಗಿರುವ ಗೊಂದಲಗಳು!
ಗೊಂದಲಗಳೆಡೆಯಿಂದಲೇ ಪ್ರಜ್ವಲಿಸಿ, ಜಗದ
ಕಣ್ತೆರೆಸುವ ಜ್ಯೋತಿ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಸುಂದರ