ಕವಿತೆಗಳು

ಲಕ್ಷ್ಮಿ ಕಿಶೋರ್ ಅರಸ್ ಅವರು ಬರೆದ ಕವಿತೆ ‘ಕರುಣೆಯ ಕೊಳ’

ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ
ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು
ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ
ಊರಿನ ಆರೋಗ್ಯದ ಮೂಲವಾಗಿದ್ದೆ.

ದೇವಳದ ಮುಂದೆ ನಾ ನಳನಳಿಸುತ್ತಿದ್ದೆ
ದಿನವೂ ಲಿಂಗಾಭಿಷೇಕ ನನ್ನೊಡಲ ಜಲದಿಂದ
ಮುಡಿಯಿಂದ ಅಡಿ ಸೇರಿ ಪಾವನವಾಗುತ್ತಿದ್ದೆ
ಮಂದಿರ, ಪ್ರಾಂಗಣ ಸುಚಿಗೊಳಿಸುತ್ತಿದ್ದೇ.

ನನ್ನಿಂದಲೇ ನಡೆಯುತ್ತಿತ್ತು ಊರ ಹಬ್ಬ
ಪೂಜೆ ಪಡೆಯುತ್ತಿದ್ದೆ ,ಹೂಮಳೆ ಹೊದಿಕೆಯಿಂದ
ರಾಜ- ಮಹಾರಾಜರು ನನ್ನಲ್ಲಿಳಿದು ಮಿಂದು
ತಲೆಗೊತ್ತಿಕೊಂಡು ಪಾವನವೆಂದು ಕರ ಜೋಡಿಸುತ್ತಿದ್ದರು!

ನನ್ನ ಬದುಕಾಯಿತಿಂದು ರೋಗಗ್ರಸ್ತ
ಪ್ರಜಾಪ್ರಭುತ್ವದಲ್ಲಿ ನಾ ಯಾರಿಗೂ ಮುಖ್ಯವಲ್ಲ
ನಾನಾಗಿದ್ದೇನೆ ಊರ ಕಲ್ಮಶಗಳ ತೊಟ್ಟಿ
ಮಡಿಯ ಗರತಿ ನಾ ಇಂದು ಬರಿ ಮೈಲಿಗೆ!

ನನ್ನತ್ತ ಸುಳಿಯರು ಯಾರು ಇಂದು
ಕ್ರಿಮಿಕೀಟ ,ವಿಷ ಜಂತುಗಳ ಒಡಲಿಗಿರಿಸಿದರು
ವೈಭವ ಮುರಿದು ,ನನ್ನ ವಿಧವೇ ಮಾಡಿದರು
ಆಧುನಿಕ ಮಾನವರು ,ನನ್ನಲ್ಲಿ ಕೊಳಚೆ ತುಂಬಿದರು

ಇಂದು ನಾನಾಗುತಿಯೆ ಊರ ರೋಗದ ಮೂಲ
ವಾಸನೆಯಿಂದ ಬಳಲುತ್ತಿಹೆ ಕೇಳಿರೆನ್ನ ನೋವಾ
ಈಜುವ ಮಕ್ಕಳ ಕಿತ್ತುಕೊಂಡಿರಿ ನೀವು
ನನ್ನ ವೈಭವವನ್ನು ಕಳಚಿದಿರಿ ನೀವು!

ಇಂದು ನನ್ನಿಂದ ಓಡುತ್ತಿರುವಿರಿ ದೂರ
ನೀವು ಮಾಡಿದ್ದೆ ಅಲ್ಲವೇ ಈ ಘನ -ಘೋರ
ನಿಮ್ಮ ಸಾಕಿದ ನನಗೆಕೆ ಈ ಶಿಕ್ಷೆ
ಓ ಮಾನವರೇ ನಾನಿಂದು ನಿಮಗೆ ಬೇಡವಾದೆನೆ.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago